ADVERTISEMENT

ಬೆಳಗಾವಿ: ಆಸಕ್ತಿಯಿಂದ ಪ್ರಜಾವಾಣಿ ವರದಿ ಓದಿದ ಡಿಸಿ ಎಂ.ಜಿ. ಹಿರೇಮಠ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 5:10 IST
Last Updated 21 ಫೆಬ್ರುವರಿ 2021, 5:10 IST
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ (ಬಲ ತುದಿ) ಪ್ರಜಾವಾಣಿ ವರದಿಯನ್ನು ಆಸಕ್ತಿಯಿಂದ ಓದಿದರು
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ (ಬಲ ತುದಿ) ಪ್ರಜಾವಾಣಿ ವರದಿಯನ್ನು ಆಸಕ್ತಿಯಿಂದ ಓದಿದರು   

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೈಲವಾಡದಲ್ಲಿ ಗ್ರಾಮ‌ವಾಸ್ತವ್ಯ ಮಾಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ (ಬಲ ತುದಿ) ಪ್ರಜಾವಾಣಿ ವರದಿಯನ್ನು ಆಸಕ್ತಿಯಿಂದ ಓದಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇದ್ದಾರೆ.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಜಿಲ್ಲಾ, ತಾಲ್ಲೂಕು ಮಟ್ಟದ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲ್ಲೂಕು ಬೈಲವಾಡದಲ್ಲಿ ಇದೇ ಮೊದಲಿಗೆ ಶನಿವಾರ ವಾಸ್ತವ್ಯ ಹೂಡಿದ್ದರು.

ಜನರ ಅಹವಾಲುಗಳನ್ನು ಆಲಿಸುವ ಜೊತೆಗೆ ಸರ್ಕಾರದ ಸಹಾಯ-ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ನಡೆದ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರೆಯಿತು. ಪ್ರಮುಖ ಇಲಾಖೆಗಳ ಅಧಿಕಾರಿಗಳೂ ಗ್ರಾಮಕ್ಕೆ ಬಂದು ನೇರವಾಗಿ ಲಭ್ಯವಾಗಿದ್ದರಿಂದ ತಮ್ಮ ನೋವುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.