ಬೆಳಗಾವಿ: ನಗರದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನಾ ಮೆರವಣಿಗೆ ಬಳಿಕ, ಶಿವಾಜಿನಗರದ ಆರ್ಟಿಒ ವೃತ್ತದ ಬಳಿ ವಾಹನಗಳ ಮೇಲೆ ಮಂಗಳವಾರ ನಡೆದಿದ್ದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಠಾಣೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಭಾನುವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 4ಕ್ಕೆ ಏರಿದೆ.
ಆಜಾದ್ ನಗರದ ಆಟೊರಿಕ್ಷಾ ಚಾಲಕ ವಾಸಿಂ ಅಹಮದ್ ಮುಲ್ಲಾ ಬಂಧಿತ ಆರೋಪಿ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸಿಪಿ ಎನ್.ವಿ. ಬರಮನಿ ತಿಳಿಸಿದ್ದಾರೆ.
ಆಜಾದ್ ನಗರದ ಝುಲ್ಫಿಕರ್ ಮೊಹಮ್ಮದ್ ಹವತ್ ಹಕೀಂ, ನ್ಯೂ ಗಾಂಧಿನಗರದ ವಾಸಿಂ ಅಹಮದ್ ಮೊಕಾಶಿ ಹಾಗೂ ಉಜ್ವಲ ನಗರ ನಿವಾಸಿ ಮೊಹಮ್ಮದ್ ತಾಹಿರ್ ಅಮಾನುಲ್ಲಾ ದೇವಲಾಪುರ ಎನ್ನುವವರನ್ನು ಬುಧವಾರ ಬಂಧಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.