ADVERTISEMENT

ಹಿರೇಬಾಗೇವಾಡಿ | ಕಾರ್ ಡಿಕ್ಕಿ: ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:23 IST
Last Updated 18 ಮೇ 2022, 4:23 IST

ಹಿರೇಬಾಗೇವಾಡಿ: ಬೈಕ್‌ಗೆ ಹಿಂದಿನಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಮೀಪದ
ಮುತ್ನಾಳ ಗ್ರಾಮದ ಹೂವಿನ ಹಳ್ಳದ ಬಳಿಯ ರಾಷ್ಟ್ರಿಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಬೆಳಗಾವಿ ಕಡೆಯಿಂದ ಧಾರವಾಡ ಕಡೆ ಸಾಗುತ್ತಿದ್ದ ಕಾರು ಬೈಕ್‌ಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಮಹಾರಾಷ್ಟ್ರ ಅಹ್ಮಮದನಗರ ಜಿಲ್ಲೆಯ ಭೋಳೆವಸ್ತಿ ಗ್ರಾಮದ ಬೈಕ್ ಸವಾರ ನಿತಿನ ಬಾವುಸಾಹೇಬ ಗಾಡೇಕರ (32) ಮೃತಪಟ್ಟವರು.

ಈ ಬಗ್ಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ವಿದ್ಯುತ್‌ ಸ್ಪರ್ಶಿಸಿ ಬಾಲಕಿ ಸಾವು
ಬೆಳಗಾವಿ:
ಇಲ್ಲಿನ ವಡಗಾವಿಯ ಆನಂದ ನಗರದ 3ನೇ ಕ್ರಾಸ್‌ ಮನೆಯಲ್ಲಿ ಮಂಗಳವಾರ ವಿದ್ಯುತ್‌ ಸ್ಪರ್ಶಿಸಿ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಮೃತರನ್ನು ದೇವಾಂಶಿ ಯೋಗೇಂದ್ರ ಚವ್ಹಾಣ(17) ಎಂದು ಗುರುತಿಸಲಾಗಿದೆ.

‘ಸ್ನಾನಕ್ಕೆ ಹೋದಾಗ ಎಲೆಕ್ಟ್ರಿಕಲ್‌ ವಾಟರ್‌ ಹೀಟರ್‌ ತಾಗಿ ಮೃತಪಟ್ಟಿದ್ದಾಳೆ’ ಎಂದು ತಾಯಿ ತೃಪ್ತಿ ಶಹಾಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.