ಬೆಳಗಾವಿ: ಇಲ್ಲಿನ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ವತಿಯಿಂದ ವಾರ್ ರೂಂ ಉದ್ಘಾಟನೆ ಮಾಡಲಾಯಿತು.
ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಆರ್. ಪಾಟೀಲ, ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ಮುಖಂಡ ರಾಜೇಂದ್ರ ಹರಕುಣಿ, ಮಹಾನಗರ ಜಿಲ್ಲಾ ಪ್ರಭಾರಿ ರಮೇಶ ದೇಶಪಾಂಡೆ ಹಾಗೂ ಒಳಚರಂಡಿ ನಿಗಮದ ನಿರ್ದೇಶಕಿ ದೀಪಾ ಕುಡಚಿ ಉದ್ಘಾಟಿಸಿದರು. ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಮುಖ ಕೇದಾರ ಜೋರಾಪೂರ, ಸಹಪ್ರಮುಖ ಶ್ರೇಯಸ್ ನಾಕಾಡಿ ಪಾಲ್ಗೊಂಡಿದ್ದರು.
ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ರಾವ್ ಬಹದ್ದೂರ್ ಕದಮ ಹಾಗೂ ಮಹಾನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಾದಾಗೌಡ ಬಿರಾದಾರ, ಮುರುಘೇಂದ್ರ ಪಾಟೀಲ ಹಾಗೂ ಗಿರೀಶ ಧೂಂಗಡಿ, ಉತ್ತರ ಮಂಡಲದ ಅಧ್ಯಕ್ಷ ಪಾಂಡುರಂಗ ದಾಮಣೇಕರ ಮತ್ತು ಮಹಾನಗರ ಮಾಧ್ಯಮ ಪ್ರಮುಖ ಶರತ್ ಪಾಟೀಲ, ಮಹಾನಗರ ಜಿಲ್ಲಾ ವಕ್ತಾರ ಹನುಮಂತ ಅ. ಕೂಂಗಾಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.