ADVERTISEMENT

ಅಥಣಿ ಆಸ್ಪತ್ರೆಯಲ್ಲಿ ರಕ್ತ ದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 14:16 IST
Last Updated 9 ಜುಲೈ 2021, 14:16 IST
ಅಥಣಿ ತಾಲ್ಲೂಕು ಅಸ್ಪತ್ರೆಯಲ್ಲಿ ಶುಕ್ರವಾರ ನಡೆದ ರಕ್ತ ದಾನ ಶಿಬಿರವನ್ನು ಟಿಎಚ್‌ಒ ಡಾ.ಬಸಗೌಡ ಕಾಗೆ ಉದ್ಘಾಟಿಸಿದರು
ಅಥಣಿ ತಾಲ್ಲೂಕು ಅಸ್ಪತ್ರೆಯಲ್ಲಿ ಶುಕ್ರವಾರ ನಡೆದ ರಕ್ತ ದಾನ ಶಿಬಿರವನ್ನು ಟಿಎಚ್‌ಒ ಡಾ.ಬಸಗೌಡ ಕಾಗೆ ಉದ್ಘಾಟಿಸಿದರು   

ಅಥಣಿ (ಬೆಳಗಾವಿ ಜಿಲ್ಲೆ): ‘ಕೋವಿಡ್ ಸಂದರ್ಭದಲ್ಲಿ ರಕ್ತದ ಕೊರತೆಯಾಗಿ ಅನೇಕ ರೋಗಿಗಳು ತೊಂದರೆ ಅನುಭವಿಸಿದರು. ಹೀಗಾಗಿ, ದಾನಿಗಳು ರಕ್ತ ನೀಡಲು ಮುಂದೆ ಬರಬೇಕು’ ಎಂದು ಟಿಎಚ್‌ಒ ಡಾ.ಬಸಗೌಡ ಕಾಗೆ ಕೋರಿದರು.

ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ, ಬಿಮ್ಸ್‌ ರಕ್ತನಿಧಿ ಕೇಂದ್ರ, ಎಡಿಎಚ್‌ಒ ಕಚೇರಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ’ ಎಂದು ತಿಳಿಸಿದರು.

ADVERTISEMENT

30 ಮಂದಿ ರಕ್ತ ದಾನ ಮಾಡಿದರು. ಡಾ.ಸಿ.ಎಸ್. ಪಾಟೀಲ, ಡಾ.ಹಣಮಂತ ಕನಮಡಿ, ಡಾ.ರೋಹಿತ್, ಸುರೇಶ ವಾಲೀಕಾರ, ಸಂಧ್ಯಾ ನಾಯಿಕ, ಎ.ಬಿ. ಗುಳಿಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.