ADVERTISEMENT

ದರೂರ ಸೇತುವೆ ಪರಿಶೀಲನೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 14:31 IST
Last Updated 11 ಸೆಪ್ಟೆಂಬರ್ 2019, 14:31 IST
ಅಥಣಿ ತಾಲ್ಲೂಕು ದರೂರ ಸೇತುವೆಯನ್ನು ಲೋಕೋಪಯೋಗಿ ಇಲಾಖೆಯವರು ‘ಸಂಚಾರ ಘಟಕ’ದ ಸಹಾಯದಿಂದ ಪರಿಶೀಲಿಸಿದರು
ಅಥಣಿ ತಾಲ್ಲೂಕು ದರೂರ ಸೇತುವೆಯನ್ನು ಲೋಕೋಪಯೋಗಿ ಇಲಾಖೆಯವರು ‘ಸಂಚಾರ ಘಟಕ’ದ ಸಹಾಯದಿಂದ ಪರಿಶೀಲಿಸಿದರು   

ಅಥಣಿ: ತಾಲ್ಲೂಕಿನ ಹಲ್ಯಾಳ, ದರೂರ ಸೇತುವೆಯ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅತ್ಯಾಧುನಿಕ ಯಂತ್ರವನ್ನು ಬಳಸಿ ಪರಿಶೀಲಿಸಿದರು.

ಜತ್ತ- ಜಾಬೋಂಟಿ ರಾಜ್ಯ ಹೆದ್ದಾರಿಯಲ್ಲಿ ದರೂರ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 50 ವರ್ಷ ಹಳೆಯ ಸೇತುವೆಯು ಇತ್ತೀಚಿಗೆ ಬಂದ ಪ್ರವಾಹ ವೇಳೆ ಮುಳುಗಡೆಯಾಗಿ 22 ದಿನಗಳು ರಸ್ತೆ ಸಂಪರ್ಕ ಕಡಿತವಾಗಿತ್ತು. ಸಮೀಪದ ತಡೆಗೋಡೆ ಮತ್ತು ರಸ್ತೆ ಕೂಡ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿತ್ತು. ಹೀಗಾಗಿ, ಪರಿಶೀಲನೆ ನಡೆಸಲಾಯಿತು.

‘ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಎಲ್ಲ ಸೇತುವೆಗಳ ಗುಣಮಟ್ಟವನ್ನೂ ಪರಿಶೀಲಿಸುತ್ತಿದ್ದೇವೆ. ದರೂರ ಸೇತುವೆ ಸ್ಥಿತಿಗತಿಯ ಸಮಗ್ರ ಮಾಹಿತಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನಂತರ ತಿಳಿಸಲಾಗುವುದು’ ಎಂದು ಎಂಜಿನಿಯರ್ ಮಧುಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ತಂಡದಲ್ಲಿ ಯಲ್ಲೇಶಗೌಡ, ಕರಿಬಸಪ್ಪಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.