
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಸಂಕೇಶ್ವರ: ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸುಣ್ಣ ಸಾಗಿಸುವ ಬೆಲ್ಟ್ ಮೇಲೆ ಬರುತಿದ್ದ ಸುಣ್ಣದ ಚೀಲಗಳನ್ನು ಹಿಡಿದಿಟ್ಟುಕೊಳ್ಳುವಾಗ ಬೆಲ್ಟ್ನಲ್ಲಿ ಬಿದ್ದು ದಿನಗೂಲಿ ಕಾರ್ಮಿಕ ಸಚಿನ ಬಸ್ಸಪ್ಪಾ ದ್ಯಾಮನಿ(36) ಮೃತಪಟ್ಟಿದ್ದಾರೆ.
ಇವರು ಇಲ್ಲಿಗೆ ಸಮೀಪದ ಅಮ್ಮಣಿಭಾವಿ ಗ್ರಾಮದವನು. ಈ ಕುರಿತು ಸಂಕೇಶ್ವರ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಕಾರ್ಮಿಕ ಸಂಘದ ಅಧ್ಯಕ್ಷ ಮೋಹನ ಕೋಟಿವಾಲೆ ಆಗ್ರಹಿಸಿದ್ದಾರೆ.