ಬೆಳಗಾವಿ: ತಾಲ್ಲೂಕಿನ ಮುತಗಾ ಹೊರವಲಯದ ಬಾವಿಯಲ್ಲಿ ಸೋಮವಾರ ರುಂಡ ಕತ್ತರಿಸಿದ ದೇಹ ಪತ್ತೆಯಾಗಿದೆ.
ಮುತಗಾ-ಮುಚ್ಛಂಡಿ ಮಾರ್ಗಮಧ್ಯೆ ಸುನೀಲ್ ಅಷ್ಟಗೇಕರ ಅವರಿಗೆ ಸೇರಿದ ಹೊಲದ ಬಾವಿಯಲ್ಲಿ ದೇಹ ತೇಲುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದರು.
ವ್ಯಕ್ತಿಯ ಕೈ ಕಾಲು ಕಟ್ಟಿ, ರುಂಡ ಕತ್ತರಿಸಿ ಬಾವಿಗೆ ಎಸೆಯಲಾಗಿದೆ. ಹೊಲಕ್ಕೆ ಹೋದ ರೈತರು ಇದನ್ನು ಕಂಡು ಮಾರಿಹಾಳ ಪೊಲೀಸರಿಗೆ ಮಾಹಿತಿ ನೀಡಿದರು.
ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.