ADVERTISEMENT

ಡಾಬಾ ಮಾಲೀಕ ಕೊಲೆ: ಐವರ ಬಂಧನ

ಜಗಳ ಬಿಡಿಸಲು ಹೋದವನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 13:44 IST
Last Updated 12 ಜುಲೈ 2021, 13:44 IST

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿ ಪಂಚವಟಿ ಡಾಬಾ ಮಾಲೀಕ ಬೈಲಹೊಂಗಲದ ಪ್ರಕಾಶ ಬಸವರಾಜ ನಾಗನೂರ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳಲ್ಲಿ ಐವರನ್ನು ಸೋಮವಾರ ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.

ಎಂ.ಕೆ. ಹುಬ್ಬಳ್ಳಿಯ ಅಬ್ದುಲ್‌ ಅಜೀಜ್ ಮಹಮ್ಮದ್‌ ಅಲಿ ಬಡೇಗಾರ, ಮಹ್ಮದ್‌ ಶಫಿ, ಶಬೀಲ ಅಹ್ಮದ್‌, ಇರ್ಫಾನ್ ಮೋದಿನ್‌ ಶಹಾ ಬಡೇಗಾರ ಹಾಗೂ ಸಾಜೀದ್ ಶಬ್ಬೀರ್‌ ಅಹ್ಮದ್‌ ಬಡೇಗಾರ ಬಂಧಿತರು.

ಬಿಲಾಲ ಅಬ್ದುಲ್‌ ಹಕ್ ಬಡೇಗಾರ, ಸರ್ಫಾಜ್ ಮಹ್ಮದ್‌ ಶಾ ಬಡೇಗಾರ ಹಾಗೂ ಶಹಾಬಾಜ್ ಮಹ್ಮದ್‌ ಶಾ ಬಡೇಗಾರ ಪರಾರಿಯಾಗಿದ್ದಾರೆ.

ADVERTISEMENT

ಜಗಳ ಬಗೆಹರಿಸಲು ಮಧ್ಯ ಪ್ರವೇಶಿಸಿದ್ದ ಡಾಬಾ ಮಾಲೀಕನನ್ನು ಭಾನುವಾರ ಜಗ್ಗು, ಕಿತ್ಲಿ ಹಾಗೂ ಬಡಿಗೆಯಿಂದ ಹೊಡೆದು ತೀವ್ರ ಗಾಯಗೊಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.