ADVERTISEMENT

ಧ್ವಜ ಕಾಯುತ್ತಾ ಧರಣಿ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 15:50 IST
Last Updated 28 ಡಿಸೆಂಬರ್ 2020, 15:50 IST
ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿರುವ ಕನ್ನಡಪರ ಹೋರಾಟಗಾರರು, ಅದನ್ನು ತೆರವುಗೊಳಿಸದಂತೆ ಕಾಯ್ದುಕೊಂಡು ಧರಣಿ ಮುಂದುವರಿಸಿದ್ದಾರೆ.
ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿರುವ ಕನ್ನಡಪರ ಹೋರಾಟಗಾರರು, ಅದನ್ನು ತೆರವುಗೊಳಿಸದಂತೆ ಕಾಯ್ದುಕೊಂಡು ಧರಣಿ ಮುಂದುವರಿಸಿದ್ದಾರೆ.   

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಎದುರು ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿರುವ ಕನ್ನಡಪರ ಹೋರಾಟಗಾರರು, ಅದನ್ನು ತೆರವುಗೊಳಿಸದಂತೆ ಕಾಯ್ದುಕೊಂಡು ಧರಣಿ ಮುಂದುವರಿಸಿದ್ದಾರೆ.

ರಾತ್ರಿ ಅಲ್ಲಿಯೇ ಅವರು ಊಟ ಮಾಡಿದರು. ಕನ್ನಡ ಅಭಿಮಾನಿಗಳು ತಂದುಕೊಟ್ಟ ಪುಲಾವ್, ಮೈಸೂರು ಪಾಕ್, ಲಡ್ಡು ಸವಿದರು.

ಸಂಜೆ ಸ್ಥಳಕ್ಕೆ ‌ಬಂದ ಮಹಾನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಹಾಗೂ ಪೊಲೀಸ್ ಅಧಿಕಾರಿಗಳು
ಮಾತುಕತೆಗಾಗಿ ಕಚೇರಿಗೆ ಬರುವಂತೆ ಆಹ್ವಾನಿಸಿದರು. ಆದರೆ, ಹೋರಾಟಗಾರರು ನಾವು ಬರುವುದಿಲ್ಲ ಎಂದು ತಿಳಿಸಿದರು. ಹೀಗಾಗಿ ಅಧಿಕಾರಿಗಳ ಮನವೊಲಿಕೆ ಫಲ ನೀಡಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.