ADVERTISEMENT

ರುದ್ರಾಕ್ಷಿ ಮಠ: ತಾಳೆಪತ್ರಗಳ ಡಿಜಿಟಲೀಕರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 14:06 IST
Last Updated 11 ಜನವರಿ 2022, 14:06 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಬೆಳಗಾವಿ: ‘ಕನ್ನಡ ಹಾಗೂ ವಚನ ಸಾಹಿತ್ಯ ಉಳಿಸುವ ಉದ್ದೇಶದಿಂದ ನಾಗನೂರು ರುದ್ರಾಕ್ಷಿಮಠದಲ್ಲಿ ಸಂಗ್ರಹಿಸಿರುವ ತಾಳೆಪತ್ರಗಳ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ತಿಳಿಸಿದರು.

‘ಶಿವಬಸವ ನಗರದಲ್ಲಿರುವ ಮಠದ ವಚನ ಅಧ್ಯಯನ ಕೇಂದ್ರದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 400–500 ವರ್ಷಗಳು ಹಳೆಯದಾದ ತಾಳೆಪತ್ರಗಳಿಗೆ ಡಿಜಿಟಲ್‌ ಸ್ಪರ್ಶ ನೀಡಲಾಗುತ್ತಿದೆ. ಅಶೋಕ ದೇಮನೂರು ನೇತೃತ್ವದಲ್ಲಿ ನಡೆದಿದೆ. ಕನ್ನಡ ಸಾಹಿತ್ಯದ ಇತಿಹಾಸ ಉಳಿಸುವ ಕಾರ್ಯ ಈ ಮೂಲಕ ಆಗುತ್ತಿದೆ’ ಎಂದರು.

‘ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವ ಸಾಹಿತ್ಯ ಆಸಕ್ತರು ಕೂಡ ಪಾಲ್ಗೊಳ್ಳಬಹುದಾಗಿದೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ADVERTISEMENT

ಮುಖಂಡ ಶಂಕರ ಗುಡಸ್ ಮಾತನಾಡಿ, ‘ತಾಳೆಗರಿಗಳು ಹಾಳಾದರೆ ಅವುಗಳಲ್ಲಿರುವ ಮಾಹಿತಿಯೂ ಕಳೆದು ಹೋಗುತ್ತದೆ. ಆಗ ನಮಗೆ ಇತಿಹಾಸ ಸಿಗುವುದಿಲ್ಲ. ಶ್ರೀಗಳ ಆಶಯದಂತೆ ಡಿಜಿಟಲೀಕರಣ ನಡೆಯುತ್ತಿದೆ. ಇದಕ್ಕೆ ಸ್ವಯಂಸೇವಕರು ಬೇಕಾಗಿದ್ದಾರೆ. 20 ದಿನಗಳವರೆಗೆ ನಡೆಯಲಿರುವ ಈ ಕಾರ್ಯದಲ್ಲಿ ಕನ್ನಡ ಮತ್ತು ವಚನ ಸಾಹಿತ್ಯದ ಅಭಿಮಾನಿಗಳು ಭಾಗವಹಿಸಬೇಕು’ ಎಂದು ಕೋರಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.