ಬೆಳಗಾವಿ: ‘ಜೀವನದ ಸುಖಕ್ಕೆ ಶಿಕ್ಷಣವೇ ಮೂಲ. ಬದುಕಿನ ಎಲ್ಲ ಸಮಸ್ಯೆಗಳನ್ನೂ ಆ ಜ್ಞಾನದ ಬೆಳಕು ಪರಿಹರಿಸಬಲ್ಲದು’ ಎಂದು ಎಸ್.ಕೆ.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ ಲತಾ ಕಿತ್ತೂರ ಹೇಳಿದರು.
ಇಲ್ಲಿನ ಆರ್ಪಿಡಿ ಕಾಲೇಜಿನಲ್ಲಿ ಗುರುವಾರ ನಡೆದ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಾಳಿಗೆ ಬೆಳಕು ತೋರಿದ ಮಹನೀಯರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ-ಪರಂಪರೆಯ ಒಂದು ಭಾಗವಾಗಿದೆ’ ಎಂದರು.
ಆರ್ಪಿಡಿ ಕಾಲೇಜಿನ ಆಡಳಿತ ನಿರ್ವಹಣಾ ಮಂಡಳಿ ಉಪಾಧ್ಯಕ್ಷೆ ಬಿಂಬಾ ನಾಡಕರ್ಣಿ, ಎಸ್.ಕೆ.ಇ. ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ಬಿ. ದೇಶಪಾಂಡೆ, ಆಡಳಿತ ಮಂಡಳಿ ಸದಸ್ಯರಾದ ಪ್ರೊ.ಎಸ್.ವೈ. ಪ್ರಭು ಮತ್ತು ಜ್ಞಾನೇಶ ಕಲಘಟಗಿ ರಾಣಿ ಪಾರ್ವತಿ ದೇವಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಪ್ರೊ.ಪ್ರಾಚಿ ಹಲಗೇಕರ ಪ್ರಾರ್ಥಿಸಿದರು, ಪ್ರೊ.ಪ್ರಸನ್ನ ಜೋಶಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.