ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಇ–ರಿಕ್ಷಾ ಕೀ ಹಸ್ತಾಂತರ ಕಾರ್ಯಕ್ರಮಕ್ಕೆ ಉತ್ತರ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಬಲಿಪಾಢ್ಯಮಿ ದಿನವಾದ ಸೋಮವಾರ ಚಾಲನೆ ನೀಡಿದರು.
'ನಿರುದ್ಯೋಗಿಗಳಿಗೆ ಆದ್ಯತೆ ಕೊಡಲಾಗುತ್ತಿದೆ. ಒಟ್ಟು 50 ಇ–ರಿಕ್ಷಾಗಳನ್ನು ನೀಡಲು ಯೋಜಿಸಲಾಗಿದೆ' ಎಂದು ಪಾಟೀಲ ತಿಳಿಸಿದರು.
ಇ–ರಿಕ್ಷಾಗಳಿಗೆ ಪೂಜೆ ಸಲ್ಲಿಸಿದ ಅವರು, ರಿಕ್ಷಾ ಚಲಾಯಿಸಿ ಫಲಾನುಭವಿಗಳೊಂದಿಗೆ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.