ADVERTISEMENT

ಹುಕ್ಕೇರಿ | ಅಮ್ಮಣಗಿ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಬನ್ನಿ ಹಬ್ಬ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 13:40 IST
Last Updated 25 ಅಕ್ಟೋಬರ್ 2023, 13:40 IST
ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿ ದೇವಸ್ಥಾನದ ಬಳಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬನ್ನಿ ಮುಡಿಯುವ ಮುನ್ನ ಪಲ್ಲಕ್ಕಿಯು ‘ಬನ್ನಿ ಮಂಟಪ’ದ ಸುತ್ತ ಐದು ಪ್ರದಕ್ಷಿಣೆ ಹಾಕಿತು.
ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿ ದೇವಸ್ಥಾನದ ಬಳಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬನ್ನಿ ಮುಡಿಯುವ ಮುನ್ನ ಪಲ್ಲಕ್ಕಿಯು ‘ಬನ್ನಿ ಮಂಟಪ’ದ ಸುತ್ತ ಐದು ಪ್ರದಕ್ಷಿಣೆ ಹಾಕಿತು.   

ಹುಕ್ಕೇರಿ: ತಾಲ್ಲೂಕಿನ ಅಮ್ಮಣಗಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಮಂಗಳವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ‘ಬನ್ನಿ ಮುಡಿಯುವ’ ಕಾರ್ಯಕ್ರಮ ವಿಧಿವತ್ತಾಗಿ ನಡೆಯಿತು.

ದಸರಾ ಹಬ್ಬದ 9ನೇ ದಿನದಂದು ಗ್ರಾಮದಿಂದ ದೇವರ ಉತ್ಸವ ಮೂರ್ತಿ ಸಮೇತ ಪಲ್ಲಕ್ಕಿಯು ದೇವಸ್ಥಾನಕ್ಕೆ ಆಗಮಿಸಿತು. ಭಕ್ತರು ಕುದುರೆ, ನಂದಿ ಕೋಲು, ಪಲ್ಲಕ್ಕಿ, ಕರಡಿ ಮಜಲು ಸಮೇತ ಮಲ್ಲಿಕಾರ್ಜುನ ದೇವರಿಗೆ ಎರಡು ಸುತ್ತು ಪ್ರದಕ್ಷಣೆ ಹಾಕಿದರು. ಬಳಿಕ ಪಲ್ಲಕ್ಕಿಯು ದೇವಸ್ಥಾನದ ಹೊರಗೆ ಬನ್ನಿ ಮಂಟಪಕ್ಕೆ ಆಗಮಿಸಿ ಐದು ಸುತ್ತು ಪ್ರದಕ್ಷಿಣೆ ಹಾಕಿತು. ಗ್ರಾಮದ ಶ್ಯಾಮರಾವ್ ಇನಾಂದಾರ್ ನೇತೃತ್ವದಲ್ಲಿ ಬನ್ನಿ ಮುಡಿಯಲಾಯಿತು. ಎಲ್ಲ ಭಕ್ತರು ಭಕ್ತಿಯಿಂದ ಬನ್ನಿ ಪಡೆದು ದೇವರಿಗೆ ಸಮರ್ಪಿಸಿ ಗ್ರಾಮಕ್ಕೆ ತೆರಳಿ ತಮ್ಮ ತಮ್ಮೊಳಗೆ ಬನ್ನಿ ವಿನಿಮಯ ಮಾಡಿಕೊಂಡರು.

ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿ ದೇವಸ್ಥಾನದ ಬಳಿ ಮಂಗಳವಾರ ಬನ್ನಿ ಮುಡಿಯುವ ಮುನ್ನ ಪಲ್ಲಕ್ಕಿಯು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT