ಬೆಳಗಾವಿ: ಇಲ್ಲಿನ ಹೊರವಲಯದ ರಾಜಹಂಸಗಡ ಕೋಟೆಗೆ ಹೊಂದಿಕೊಂಡಿರುವ ಮತ್ತು ಆ ಮಾರ್ಗದ ಗುಡ್ಡದಲ್ಲಿನ ಪ್ರದೇಶದಲ್ಲಿ ಭಾನುವಾರ ಸಂಜೆ ಬೆಂಕಿ ಹೊತ್ತಿಕೊಂಡು, ಹತ್ತಾರು ಎಕರೆ ಪ್ರದೇಶದಲ್ಲಿ ಕುರುಚಲು ಗಿಡಗಳು ಸುಟ್ಟು ಹೋಗಿವೆ.
ಆ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹುಲ್ಲು ಬೆಳೆದಿತ್ತು. ಚಿಕ್ಕ ಗಿಡ ಹಾಗೂ ಮರಗಳೂ ಇವೆ. ಹುಲ್ಲು ಬಹುತೇಕ ಒಣಗಿದ ಸ್ಥಿತಿಯಲ್ಲಿದ್ದಿರಿಂದ ಬೆಂಕಿಯ ಕೆನ್ನಾಲಿಗೆಯು ಕ್ಷಣ ಮಾತ್ರದಲ್ಲಿ ವ್ಯಾಪಿಸಿದೆ. ಇದರಿಂದ ಹುಲ್ಲು ಭಸ್ಮವಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಅವರಿಗೆ ಸ್ಥಳೀಯರೂ ನೆರವಾದರು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.