ADVERTISEMENT

ಬೆಳಗಾವಿ: ₹5 ಸಾವಿರಕ್ಕಾಗಿ ಜಾನಪದ ಗಾಯಕನ ಕೊಲೆ

ಕಾರು ಹಾಯಿಸಿದ ದುಷ್ಕರ್ಮಿಗಳು: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 23:42 IST
Last Updated 13 ಜುಲೈ 2025, 23:42 IST
ಮಾರುತಿ ಲಠ್ಠೆ  
ಮಾರುತಿ ಲಠ್ಠೆ     

ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬೂದಿಹಾಳ ಗ್ರಾಮದ ಬಳಿ ಗುರುವಾರ ರಾತ್ರಿ ಕೇವಲ ಐದು ಸಾವಿರ ರೂಪಾಯಿಗಾಗಿ ಜಾನಪದ ಗಾಯಕ ಮಾರುತಿ ಅಡಿವೆಪ್ಪ ಲಠ್ಠೆ (22) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. 

ಈರಪ್ಪ ವಸಂತ ಅಕ್ಕಿವಾಟೆ ಬಳಿ ಗಾಯಕ ಮಾರುತಿ ಲಠ್ಠೆ, ಕಬ್ಬು ಕಟಾವು ಮಾಡುವವರ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕಾಗಿ ₹50 ಸಾವಿರ ಮುಂಗಡ ಹಣ ಪಡೆದಿದ್ದರು. ಅದರಲ್ಲಿ ₹45 ಸಾವಿರ ಮರು ಪಾವತಿಸಿದ್ದರು. ಇನ್ನೂ ಐದು ಸಾವಿರ ಕೊಡಬೇಕಾಗಿತ್ತು.

ತನ್ನ ಜಾನಪದ ಹಾಡುಗಳಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮತ್ತು ಕಾರ್ಖಾನೆಗೆ ಸಾಗಣೆ ಮಾಡುವ ಗುಂಪಿನಲ್ಲಿ ಕೆಲಸ ಬಿಟ್ಟು ಸಂಗೀತದ ಕಡೆಗೆ ಹೆಚ್ಚಿನ ಗಮನಹರಿಸಿದ್ದರು. ಹೀಗಾಗಿ ಮಾರುತಿ, ಈರಪ್ಪನ ಕೆಂಗಣ್ಣಿಗೆ ಗುರಿಯಾಗಿದ್ದರು.

ADVERTISEMENT

ಬಾಕಿ ಹಣ ವಾಪಸ್ ನೀಡದಕ್ಕೂ ಆಕ್ರೋಶಗೊಂಡಿದ್ದ ಈರಪ್ಪ, ತನ್ನ ಸಹಚರರೊಂದಿಗೆ ಸೇರಿ ಮಾರುತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಲ್ಲದೇ, ಆತನ ಮೇಲೆ ಕಾರು ಹಾಯಿಸಿದ್ದಾರೆ.

ಮಾರುತಿಗೆ ಕಾರು ಹರಿಸಿದ ದುಷ್ಕರ್ಮಿಗಳ ಕಾರು ಕೂಡ ಪಲ್ಟಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಈ ವೇಳೆ ಆರೋಪಿ ಈರಪ್ಪ ಅಕ್ಕಿವಾಟೆಗೆ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ದೇವನಕಟ್ಟಿಯ ಗ್ರಾಮದ ಸಿದ್ದರಾಮ ವಡೆಯರ (32) ಹಾಗೂ ಜೋಡಟ್ಟಿ ಗ್ರಾಮದ ಆಕಾಶ ಉರ್ಫ್ ಅಕ್ಷಯ ಪೂಜೇರಿ (20) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇತರರಿಗೆ ಶೋಧ ನಡೆಸಿದ್ದಾರೆ. 

 ಮಾರುತಿ ಲಠ್ಠೆ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.