ADVERTISEMENT

‘ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 13:49 IST
Last Updated 25 ಸೆಪ್ಟೆಂಬರ್ 2020, 13:49 IST
ತೆಲಸಂಗ ಸಮೀಪದ ಕನ್ನಾಳ ಗ್ರಾಮದಲ್ಲಿ ಆಯುರ್ವೇದ ಔಷಧಿ ವಿತರಿಸಲಾಯಿತು
ತೆಲಸಂಗ ಸಮೀಪದ ಕನ್ನಾಳ ಗ್ರಾಮದಲ್ಲಿ ಆಯುರ್ವೇದ ಔಷಧಿ ವಿತರಿಸಲಾಯಿತು   

ತೆಲಸಂಗ: ‘ರೋಗ ಬಂದ ಮೇಲೆ ನರಳುವ ಮುನ್ನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮತ್ತು ಎಚ್ಚರ ವಹಿಸುವುದು ಇಂದಿನ ಅಗತ್ಯವಾಗಿದೆ’ ಎಂದು ಹೊನವಾಡದ ಬಾಬುರಾವ ಮಹಾರಾಜರು ಹೇಳಿದರು.

ಸಮೀಪದ ಕನ್ನಾಳ ಗ್ರಾಮದಲ್ಲಿ ಆಯುರ್ವೇದ ಔಷಧಿ ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

‘ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಸೋಂಕುಗಳಿಂದ ದೂರವಾಗಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕನ್ನಾಳದ ಬಸವಲಿಂಗ ಹಿರೇಮಠ ಸ್ವಾಮೀಜಿ ಮಾತನಾಡಿದರು. ಹಿರಿಯರಾದ ನಾನಾಗೌಡ ಪಾಟೀಲ, ಯಂಕಣ್ಣ ಅಸ್ಕಿ, ಅಪ್ಪಾಸಾಹೇಬ ಇಸರಗೊಂಡ, ಧರೆಪ್ಪ ದಳವಾಯಿ, ಅಶೋಕ ಮರನೂರ, ತಮ್ಮಣ್ಣ ಹಿರೇಕುರಬರ, ಸಿದ್ರಾಮ ದಳವಾಯಿ, ಚಂದ್ರಶೇಖರ ವಳಸಂಗ, ಸಂಗಪ್ಪ ನೇಮಗೌಡ, ಅಲ್ಲಾಭಕ್ಷ
ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.