ADVERTISEMENT

ಮಂತ್ರಿನೇ ಆಗವಲ್ಲ, ಇನ್ನು ಮುಖ್ಯಮಂತ್ರಿ ಹೆಂಗ್ ಆಗ್ತಾನ್ರೀ: ರಮೇಶ್‌ ಕತ್ತಿ

ಉಮೇಶ್‌ ಕತ್ತಿ ಬಗ್ಗೆ ಸಹೋದರನ ಹಾಸ್ಯ ಚಟಾಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 9:50 IST
Last Updated 29 ಅಕ್ಟೋಬರ್ 2020, 9:50 IST
ರಮೇಶ ಕತ್ತಿ
ರಮೇಶ ಕತ್ತಿ   

ಬೆಳಗಾವಿ: ‘ಸಹೋದರ ಉಮೇಶ ಕತ್ತಿ ಮಂತ್ರಿನೇ ಆಗವಲ್ಲ, ಇನ್ನು ಮುಖ್ಯಮಂತ್ರಿ ಹೆಂಗ್ ಆಗ್ತಾನ್ರೀ. ಸಿಪಾಯಿ ಆಗಾಕ್ ಆಗವಲ್ತು, ಇನ್ನು ಡಿಸಿ ಆಗ್ತಾನ?’.

– ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಕೇಳಿದ ಹಾಸ್ಯ ಚಟಾಕಿ ಹಾರಿಸಿದ್ದು ಹೀಗೆ.

ಇಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗಬೇಕು ಎಂದು ಈ ಭಾಗದ ಜನರು ಬಯಸುತ್ತಿದ್ದಾರೆ. ಬಹಳ ವರ್ಷಗಳಿಂದ ಇಲ್ಲಿನವರಿಗೆ ಅವಕಾಶ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಉಮೇಶ ಕತ್ತಿ ಕೂಡ ದನಿ ಎತ್ತಿದ್ದಾರೆ’ ಎಂದರು.

ADVERTISEMENT

‘ನಾನು ಹಿರಿಯ ರಾಜಕಾರಣಿ, ಅನುಭವ ಜಾಸ್ತಿ ಇದೆ. ಮೂರು ಮುಖ್ಯಮಂತ್ರಿಗಳ ಕೈಯಲ್ಲಿ ಹದಿಮೂರುವರೆ ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಮುಂದೊಂದು ದಿನ ಆಗುತ್ತೇನೆ ಎಂದು ಅವರು ಹೇಳುತ್ತಿರುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.