ಬೆಳಗಾವಿ: ಊರಿನ ಕೆರೆಗೆ ಸರ್ಕಾರದಿಂದ ಜಾಗ ಮಂಜೂರಾಗುವವರೆಗೂ ಶರ್ಟ್ ಬದಲಾಯಿಸುವುದಿಲ್ಲ ಎಂದು ಶಪಥ ಮಾಡಿ ಮೂರು ವರ್ಷಗಳವರೆಗೆ ಹೋರಾಟ ಮಾಡಿದ್ದ ತಾಲ್ಲೂಕಿನ ಹಂದಿಗನೂರಿನ ಜೋತಿಬಾ ಮಾನವಾಡಕರ ಅವರ ಕಥೆ ಸಿನಿಮಾಕ್ಕೆ ಪ್ರೇರಣೆಯಾಗಿದೆ.
'ಪ್ರಜಾವಾಣಿ'ಯಲ್ಲಿ ಬುಧವಾರ ಪ್ರಕಟವಾಗಿದ್ದ ವಿಶೇಷ ವರದಿ ಗಮನಿಸಿದ ಚಲನಚಿತ್ರ ನಿರ್ದೇಶಕ ಬಾ.ಮಾ. ಹರೀಶ್ ಅವರು ಜೋತಿಬಾ ಕುರಿತು ಪತ್ರಿಕೆಯ ಪ್ರತಿನಿಧಿಯಿಂದ ಮಾಹಿತಿ ಪಡೆದರು.
'ಸಮಾಜದ ಮೇಲೆ ಪರಿಣಾಮ ಬೀರುವ ಹಾಗೂ ನಿಸ್ವಾರ್ಥ ಹೋರಾಟಗಾರನ ಕುರಿತು ಕಥೆ ಮಾಡುತ್ತಿದ್ದೆವು. ನಾವು ಯೋಚಿಸುತ್ತಿದ್ದ ಕಥಾವಸ್ತುವಿಗೆ ಜೋತಿಬಾ ಅವರ ಛಲದ ಹೋರಾಟ ಪ್ರೇರಣೆಯಾಗಿದೆ. ಅವರೊಂದಿಗೆ ಮಾತನಾಡಿ ಅವರ ಹೋರಾಟದ ಹಾದಿಯ ವಿಷಯವನ್ನೂ ಕಥೆಯಲ್ಲಿ ಸೇರಿಸಲು ಉದ್ದೇಶಿಸಿದ್ದೇನೆ. ಇಂತಹ ಹೋರಾಟಗಳು ಸಮಾಜಕ್ಕೆ ಹಾಗೂ ಗ್ರಾಮೀಣ ಜನರಿಗೆ ಸ್ಫೂರ್ತಿ ತುಂಬುತ್ತವೆ' ಎಂದು ಹೇಳಿದರು.
ಇದನ್ನೂ ಓದಿ:ಕೆರೆಜಾಗಕ್ಕಾಗಿ 3 ವರ್ಷ ಹೊಸ ಬಟ್ಟೆ ತೊಡಲಿಲ್ಲ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.