ADVERTISEMENT

ಬೆಳಗಾವಿ | ಕೆರೆಗಾಗಿ ಜೋತಿಬಾ ವಿನೂತನ ಹೋರಾಟ: ಸಿನಿಮಾಕ್ಕೆ ಪ್ರೇರಣೆ

ಶರ್ಟ್ ಬದಲಿಸುವುದಿಲ್ಲ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 4:00 IST
Last Updated 11 ಜೂನ್ 2020, 4:00 IST
ಬೆಳಗಾವಿ ತಾಲ್ಲೂಕು ಹಂದಿಗನೂರು ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕೆ ದೊರೆತ ಜಾಗವಿರುವ ಪ್ರದೇಶ (ಒಳಚಿತ್ರದಲ್ಲಿ ಜೋತಿಬಾ)
ಬೆಳಗಾವಿ ತಾಲ್ಲೂಕು ಹಂದಿಗನೂರು ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕೆ ದೊರೆತ ಜಾಗವಿರುವ ಪ್ರದೇಶ (ಒಳಚಿತ್ರದಲ್ಲಿ ಜೋತಿಬಾ)   
""
""

ಬೆಳಗಾವಿ: ಊರಿನ ಕೆರೆಗೆ ಸರ್ಕಾರದಿಂದ ಜಾಗ ಮಂಜೂರಾಗುವವರೆಗೂ ಶರ್ಟ್ ಬದಲಾಯಿಸುವುದಿಲ್ಲ ಎಂದು ಶಪಥ ಮಾಡಿ ಮೂರು ವರ್ಷಗಳವರೆಗೆ ಹೋರಾಟ ಮಾಡಿದ್ದ ತಾಲ್ಲೂಕಿನ ಹಂದಿಗನೂರಿನ ಜೋತಿಬಾ ಮಾನವಾಡಕರ ಅವರ ಕಥೆ ಸಿನಿಮಾಕ್ಕೆ ಪ್ರೇರಣೆಯಾಗಿದೆ.

'ಪ್ರಜಾವಾಣಿ'ಯಲ್ಲಿ ಬುಧವಾರ ಪ್ರಕಟವಾಗಿದ್ದ ವಿಶೇಷ ವರದಿ ಗಮನಿಸಿದ ಚಲನಚಿತ್ರ ನಿರ್ದೇಶಕ ಬಾ.ಮಾ. ಹರೀಶ್ ಅವರು ಜೋತಿಬಾ ಕುರಿತು ಪತ್ರಿಕೆಯ ಪ್ರತಿನಿಧಿಯಿಂದ ಮಾಹಿತಿ ಪಡೆದರು.

'ಸಮಾಜದ ಮೇಲೆ ಪರಿಣಾಮ ಬೀರುವ ಹಾಗೂ ನಿಸ್ವಾರ್ಥ ಹೋರಾಟಗಾರನ ಕುರಿತು ಕಥೆ ಮಾಡುತ್ತಿದ್ದೆವು. ನಾವು ಯೋಚಿಸುತ್ತಿದ್ದ ಕಥಾವಸ್ತುವಿಗೆ ಜೋತಿಬಾ ಅವರ ಛಲದ ಹೋರಾಟ ಪ್ರೇರಣೆಯಾಗಿದೆ. ಅವರೊಂದಿಗೆ ಮಾತನಾಡಿ ಅವರ ಹೋರಾಟದ ಹಾದಿಯ ವಿಷಯವನ್ನೂ ಕಥೆಯಲ್ಲಿ ಸೇರಿಸಲು ಉದ್ದೇಶಿಸಿದ್ದೇನೆ. ಇಂತಹ ಹೋರಾಟಗಳು ಸಮಾಜಕ್ಕೆ ಹಾಗೂ ಗ್ರಾಮೀಣ ಜನರಿಗೆ ಸ್ಫೂರ್ತಿ ತುಂಬುತ್ತವೆ' ಎಂದು ಹೇಳಿದರು.

ADVERTISEMENT
ಪ್ರಜಾವಾಣಿ ಮುಖಪುಟದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ
ಬೆಳಗಾವಿಯಲ್ಲಿ ಈಚೆಗೆ ಜೋತಿಬಾ ಮನವಾಡಕರ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅಭಿನಂದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.