ಬೆಳಗಾವಿ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಕೋವಿಡ್ ಕಾರಣದಿಂದ ಸೋಮವಾರ ಸರಳವಾಗಿ ಆಚರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಫೋಟೊಗೆ ಪುಷ್ಪಾರ್ಚನೆ ಮಾಡಿದರು. ಇಲಾಖೆಯ ಸಿಬ್ಬಂದಿ ವಿನೋದ್ ಸುಣಗಾರ, ಸಂತೋಷ ಚವ್ಹಾಣ, ಕೆಂಚಪ್ಪ ಮುರಗೊಡಿ, ವಸಂತ ಪಕ್ಕೇದ, ಮೆಹಬೂಬಿ ಇದ್ದರು.
‘ಸ್ತ್ರೀ ಕುಲಕ್ಕೆ ಮಾದರಿ’
ತೆಲಸಂಗ: ‘ಹೇಮರೆಡ್ಡಿ ಮಲ್ಲಮ್ಮ ಅವರು ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಸಾಧಿಸಿ ಪ್ರಪಂಚಕ್ಕೆ ತೋರಿಸಿ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾರೆ’ ಎಂದು ಪಿಡಿಒ ಬೀರಪ್ಪ ಕಡಗಂಚಿ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಸರಳವಾಗಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದಾನ ಗುಣ, ದಾಸೋಹ ತತ್ಪರತೆ, ನಿಸ್ವಾರ್ಥ ಭಕ್ತಿಗೆ ಮಲ್ಲಮ್ಮ ಹೆಸರಾಗಿದ್ದಾರೆ. ಅವರ ಬದುಕನ್ನು ಪ್ರತಿಯೊಬ್ಬರೂ ತಿಳಿದು ಅದರಂತೆ ನಡೆದರೆ ಕೌಟಂಬಿಕ ಜೀವನದಲ್ಲಿ ನೆಮ್ಮದಿ ಕಾಣಬಹುದು’ ಎಂದರು.
ಸಿಬ್ಬಂದಿ ಶಿವಾನಂದ ಬನಗೊಂಡ, ರಾಜು ಕುಮಠಳ್ಳಿ, ದಾನಪ್ಪ ಕರ್ಣಿ, ವಿಜು, ಅಲ್ಲು ಸವನೂರ, ರಮೇಶ ಸಿಂದಗಿ, ಮಹೇಶ ಕುಂಬಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.