ADVERTISEMENT

ಖಾನಾಪುರ | ಕರಡಿಗಳ ದಾಳಿ: ರೈತನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 6:52 IST
Last Updated 17 ಜನವರಿ 2024, 6:52 IST
<div class="paragraphs"><p>ಕರಡಿ (ಸಾಂದರ್ಭಿಕ ಚಿತ್ರ)</p></div>

ಕರಡಿ (ಸಾಂದರ್ಭಿಕ ಚಿತ್ರ)

   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕಣಕುಂಬಿ ಅರಣ್ಯ ವ್ಯಾಪ್ತಿಯ ಹುಳಂದ ಗ್ರಾಮದ ಹೊರವಲಯದಲ್ಲಿ ಬುಧವಾರ ದನ ಮೇಯಿಸಲು ತೆರಳಿದ್ದ ರೈತರೊಬ್ಬರು, ಕರಡಿಗಳ ದಾಳಿಯಿಂದ ಗಾಯಗೊಂಡಿದ್ದಾರೆ.

ಹುಳಂದ ಗ್ರಾಮದ ವಿಠ್ಠಲ ಗಾವಡೆ (54) ಅವರ ಮೇಲೆ‌ ಒಂದು‌ ಹೆಣ್ಣು ಕರಡಿ‌ ಹಾಗೂ‌ ಅದರ ಎರಡು ಮರಿಗಳು ದಾಳಿ ಮಾಡಿವೆ. ಅವರ ಕೈ, ಮುಖ, ಬೆನ್ನು, ಕಾಲುಗಳನ್ನು ಪರಚಿವೆ. ಗಂಭೀರ ಗಾಯಗೊಂಡು, ತೀವ್ರ ರಕ್ತಸ್ರಾವದಿಂದ ಬಳಲಿದ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.