ADVERTISEMENT

ಸುರೇಶ ಅಂಗಡಿ ಕುಟುಂಬದೊಂದಿಗೆ ಇಡೀ ಪಕ್ಷ ನಿಲ್ಲಲಿದೆ: ಕಟೀಲ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 6:30 IST
Last Updated 29 ಸೆಪ್ಟೆಂಬರ್ 2020, 6:30 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.   

ಬೆಳಗಾವಿ: ‘ಸುರೇಶ ಅಂಗಡಿ ಅವರ ಕುಟುಂಬದ ಜೊತೆ ಇಡೀ ಪಕ್ಷ ನಿಲ್ಲಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಸುರೇಶ ಅಂಗಡಿ ಮಾರ್ಗದರ್ಶಕರಾಗಿ ಹಿರಿಯ ಅಣ್ಣನಂತಿದ್ದರು. ಅವರು ನಿಧನರಾದಾಗ ನಾನು ಕ್ವಾರೆಂಟೈನ್‌ನಲ್ಲಿದ್ದೆ. ಹೀಗಾಗಿ ಆಗ ಬರಲು ಆಗಿರಲಿಲ್ಲ’ ಎಂದರು.

ADVERTISEMENT

‘ಮುಂಬೈ ಕರ್ನಾಟಕ ಭಾಗದಲ್ಲಿ ಒಬ್ಬ ಪ್ರಭಾವಶಾಲಿ ನಾಯಕರಾಗಿದ್ದ ಅಂಗಡಿ. ಈ ಭಾಗದಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದವರು. ಪಕ್ಷ ನಿಷ್ಠೆ, ಸಿದ್ಧಾಂತವನ್ನು ಅವರಿಂದ ಕಲಿಯಬೇಕು ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಹತ್ತಾರು ಸಚಿವರು ಮಾಡಿದ್ದಕ್ಕಿಂತ ಹೆಚ್ಚು ಹಾಗೂ
ಅತಿ ಹೆಚ್ಚು ಅನುದಾನವನ್ನು ರಾಜ್ಯಕ್ಕೆ ತಂದಿದ್ದಾರೆ’ ಎಂದು ಸ್ಮರಿಸಿದರು.

‘ಸುರೇಶ ಅಂಗಡಿ ಸ್ಮಾರಕ ಮತ್ತು ಬೆಳಗಾವಿ- ಯಶವಂತಪುರ ರೈಲಿಗೆ ಅವರ ಹೆಸರು ಇಡುವ ವಿಚಾರ ಸರ್ಕಾರದ ಮುಂದೆ ಇದೆ. ಪರಿಶೀಲನೆ ಮಾಡುತ್ತೇವೆ‌’ ಎಂದು ಹೇಳಿದರು. ನಂತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.