ಬೆಳಗಾವಿ: ಇಲ್ಲಿನ ಉದ್ಯಮಬಾಗ್ನಲ್ಲಿರುವ ಬಿಡಿಎಸ್ಎಸ್ಐಎ (ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ) 37ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಸೋಮವಾರ ನಡೆಯಿತು.
2021ರಿಂದ 2023ನೇ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಮಹದೇವ ಚೌಗುಲೆ (ಅಧ್ಯಕ್ಷ), ಶ್ರೀಧರ ಉಪ್ಪಿನ (ಉಪಾಧ್ಯಕ್ಷ), ನಿತಿನ ಲಾಂಡಗೆ (ಕಾರ್ಯದರ್ಶಿ), ಸಂದೀಪ ಬಾಗೇವಾಡಿ (ಜಂಟಿ ಕಾರ್ಯದರ್ಶಿ), ಸತೀಶ ನೆರಲೇಕರ (ಖಜಾಂಚಿ), ರವಿ ರಾವ್, ಪ್ರಭಾಕರ ನಾಗರಮುನ್ನೋಳಿ, ಸದಾಶಿವ ಜೀರಗೆ, ಜಯದೇವ ಡೊಳ್ಳಿ, ಅನಿಲ ಕುಟ್ರೆ, ಬಸವರಾಜ ರಾಂಪುರೆ, ವೈಭವ ಯಾದವ ಹಾಗೂ ವಿ. ಪಾಟೀಲ (ಎಲ್ಲರೂ ವ್ಯವಸ್ಥಾಪನಾ ಸಮಿತಿ ಸದಸ್ಯರು) ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.