ADVERTISEMENT

ಬೆಳಗಾವಿ: ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 16:19 IST
Last Updated 29 ಜೂನ್ 2021, 16:19 IST

ಬೆಳಗಾವಿ: ಪೊಲೀಸ್ ಇನ್‌ಸ್ಪೆಕ್ಟರ್‌ (ಸಿವಿಲ್)ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಆದೇಶಿಸಿದೆ.

ಬಾಗಲಕೋಟೆಯ ಹೆಸ್ಕಾಂನಲ್ಲಿದ್ದ ಮಲ್ಲಿಕಾರ್ಜುನ ಎಸ್. ತುಳಸಿಗೇರಿ ಅವರನ್ನು ಮಾರ್ಕೆಟ್‌ ಠಾಣೆಗೆ ವರ್ಗಾಯಿಸಲಾಗಿದೆ.

ಎಸಿಬಿಯಲ್ಲಿದ್ದ ಮಂಜುನಾಥ ಹಿರೇಮಠ– ಎಪಿಎಂಸಿ ಠಾಣೆಗೆ, ವಿನಾಯಕ ಬಡಿಗೇರ ಅವರನ್ನು ಟಿಳಕವಾಡಿಯಿಂದ ಶಹಾಪುರ ಠಾಣೆಗೆ, ರಾಘವೇಂದ್ರ ಹವಾಲ್ದಾರ– ಶಹಾಪುರದಿಂದ ಟಿಳಕವಾಡಿಗೆ, ಧೀರಜ್ ಬಿ. ಶಿಂಧೆ– ಖಡೇಬಜಾರ್‌ನಿಂದ ಉದ್ಯಮ ಬಾಗ್‌ ಠಾಣೆಗೆ, ದಿಲೀಪ ಪಿ. ನಿಂಬಾಳಕರ– ಡಿಸಿಆರ್‌ಇಯಿಂದ ಖಡೇಬಜಾರ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ADVERTISEMENT

ಸುದರ್ಶನ ಕೆ. ಪಟ್ಟಣಕುಡೆ– ಎಸಿಬಿಯಿಂದ ಮಹಿಳಾ ಪೊಲೀಸ್ ಠಾಣೆಗೆ, ಜಾವೇದ್ ಎಫ್. ಮುಸಾಪುರಿ– ಎಪಿಎಂಸಿ ಠಾಣೆಯಿಂದ ಎಸಿಬಿಗೆ, ದಯಾನಂದ ಶೇಗುಣಸಿ– ಉದ್ಯಮಬಾಗ್‌ನಿಂದ ಐಎಸ್‌ಡಿಗೆ, ಶ್ರೀದೇವಿ ಎ. ಪಾಟೀಲ–ಮಹಿಳಾ ಠಾಣೆಯಿಂದ ಡಿಎಸ್‌ಬಿಗೆ ವರ್ಗಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.