ಬೆಳಗಾವಿ: ತಾಲ್ಲೂಕಿನರಾಜಹಂಸಗಡದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಕನ್ನಡ ಕಡೆಗಣಿಸಿ ಮರಾಠಿ ಪ್ರೇಮ ಮೆರೆದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರುಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ರಾಜ್ಯ ಸರ್ಕಾರದ ಕಾರ್ಯಕ್ರಮದ ಬ್ಯಾನರ್ನಲ್ಲಿ ಕನ್ನಡ ಬಳಸಿಲ್ಲ. ಮರಾಠಿ ರಾರಾಜಿಸಿದೆ. ಇದರಿಂದಾಗಿ ಕನ್ನಡಿಗರ ಸ್ವಾಭಿಮಾನಕ್ಕೆ ತೀವ್ರ ಧಕ್ಕೆ ಉಂಟಾಗಿದೆ. ಕನ್ನಡ ನಾಡಿನ ಹೋರಾಟಗಾರರಾದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿರಾಯಣ್ಣ, ಅಮಟೂರು ಬಾಳಪ್ಪ ಮೊದಲಾದವರ ಪ್ರತಿಮೆ ಸ್ಥಾಪಿಸದೇ, ಮತ ಬ್ಯಾಂಕ್ಗಾಗಿ ಹಾಗೂ ಮರಾಠಿಗರನ್ನು ಓಲೈಸಲು ಶಿವಾಜಿ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ’ ಎಂದು ಟೀಕಿಸಿದರು.
ನಿಂಗರಾಜ ಗುಂಡ್ಯಾಗೋಳ, ರಮೇಶ ತಳವಾರ, ಮನೋಹರ ಧಾಮನೆ, ಸಂತೋಷ ತೇಲಿಮನಿ, ವಾಸು ಕಂಗರಾಳಿ, ಬಸವರಾಜ ಹಳಿಮನಿ, ಮಲ್ಲಪ್ಪ ನಾಯಿಕ, ಯಲ್ಲಪ್ಪ ತಿರಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.