ಗೋಕಾಕ: ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಶನಿವಾರ ಸಂಜೆ ಒಂದು ತಾಸು ಉತ್ತಮ ಮಳೆ ಸುರಿಯಿತು. ಬಹಳ ದಿನಗಳ ನಂತರ ಸುರಿದ ಮಳೆಯಿಂದ ಚರಂಡಿಗಳು ತುಂಬಿ ಹರಿದು, ರಸ್ತೆ ಮೇಲೆ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತು.
ಗೋಕಾಕ ಸುತ್ತ– ಮುತ್ತಲಿನ ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲೂ ಮಳೆ ಸುರಿಯಿತು. ಮಳೆಯಿಂದ ಕಬ್ಬು ಕಟಾವು ಮತ್ತು ಸಾಗಣೆ ಕೆಲಸಕ್ಕೆ ಅಡಚಣೆ ಉಂಟಾಗಲಿದೆ. ಕೃಷಿ ಭೂಮಿಯಿಂದ ಕಬ್ಬು ಹೊತ್ತ ವಾಹನಗಳು ಮುಖ್ಯ ರಸ್ತೆಗಳಿಗೆ ಬರಲಾಗದೇ ಮತ್ತೆ ಕಬ್ಬು ಬೆಳೆಗಾರರು ಮತ್ತು ಸಾಗಾಟಗಾರರು ತೊಂದರೆಗೆ ಒಳಗಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.