ADVERTISEMENT

‘ಕನ್ನಡಿಗರ ಕೈಗೆ ಉದ್ಯೋಗ ಸಿಗಲಿ’: ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 4:09 IST
Last Updated 30 ನವೆಂಬರ್ 2022, 4:09 IST
ಸಂಕೇಶ್ವರ ಸಮೀಪದ ಕಣಗಲಾದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು
ಸಂಕೇಶ್ವರ ಸಮೀಪದ ಕಣಗಲಾದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು   

ಸಂಕೇಶ್ವರ: ಕನ್ನಡದಲ್ಲಿ ಕಲಿತವರಿಗೆ ಉದ್ಯೋಗಗಳು ಸಿಕ್ಕಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ ಎಂದು ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕರೆ ನೀಡಿದರು.

ಇಲ್ಲಿಗೆ ಸಮೀಪದ ಕಣಗಲಾದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಮನೆ-ಮನೆಗಳಿಗೂ ಕನ್ನಡ ಸಾಹಿತ್ಯದ ಪುಸ್ತಕಗಳು ಸಿಗುವಂತಾಗಬೇಕು. ಮಕ್ಕಳು ಕನ್ನಡ ಸಾಹಿತ್ಯದ ಆಸ್ವಾದನೆಯನ್ನು ಪಡೆಯಬೇಕು’ ಎಂದರು.

ADVERTISEMENT

ಕನ್ನಡ ಪರ ಹೋರಾಟಗಾರ ಪ್ರಮೋದ ಹೊಸಮನಿ ಅವರು ಮಾತನಾಡಿ, ‘ಕನ್ನಡವೇ ನಮ್ಮ ಧರ್ಮ, ಕನ್ನಡವೇ ನಮ್ಮ ದೇವಾಲಯ, ಕನ್ನಡಮ್ಮನೇ ನಮ್ಮ ದೇವರು ’ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಮಹೇಶ ಹಟ್ಟಿಹೋಳಿ ಅವರು ಮಾತನಾಡಿ, ‘ಕನ್ನಡ ನೆಲ, ನುಡಿ, ಜಲದ ವಿಚಾರ ಬಂದಾಗ ಎಲ್ಲ ಕನ್ನಡಿಗರು ಒಂದಾಗಬೇಕು’ ಎಂದರು.

ಹಿರಿಯ ಕವಿ ಕಾಡೇಶ ಬಸ್ತವಾಡಿ ಅವರು ಮಾತನಾಡಿ, ಯುವ ಲೇಖಕರು ಸ್ಥಳಿಯ ಭಾಷೆಯನ್ನು ಬಳಸಿಕೊಂಡು ಸಾಹಿತ್ಯ ರಚನೆ ಮಾಡಬೇಕು ಎಂದರು.

ಸಮಾರಂಭದಲ್ಲಿ ಪಿ.ಎಸ್.ಐ ಶಿವರಾಜ ನಾಯಿಕವಾಡಿ, ಬಸವರಾಜ ನಾಯಿಕ, ರಮೇಶ ನಾಯಿಕ, ಶಂಕರ ಕಲ್ಯಾಣಿ, ವಿನಾಯಕ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ವಿಜಯಲಕ್ಷ್ಮಿ ಮಿರ್ಜಿ ಸ್ವಾಗತಿಸಿದರು. ಸುನೀಲ ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.