ADVERTISEMENT

ವಿಟಿಯು ಕುಲಪತಿಯಾಗಿ ಪ್ರೊ.ವಿದ್ಯಾಶಂಕರ್‌ ನೇಮಕ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 14:20 IST
Last Updated 29 ಸೆಪ್ಟೆಂಬರ್ 2022, 14:20 IST
ಪ್ರೊ.ವಿದ್ಯಾಶಂಕರ್‌
ಪ್ರೊ.ವಿದ್ಯಾಶಂಕರ್‌    

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ನೂತನ ಕುಲಪತಿಯಾಗಿ ಪ್ರೊ.ಎಸ್‌.ವಿದ್ಯಾಶಂಕರ್‌ ಅವರನ್ನು ಗುರುವಾರ ನೇಮಕ ಮಾಡಿ, ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

2016ರಲ್ಲಿ ವಿಟಿಯು ಕುಲಪತಿಯಾಗಿ ನೇಮಕವಾಗಿದ್ದ ಪ್ರೊ.ಕರಿಸಿದ್ಧಪ್ಪ ಅವರನ್ನೇ, ಎರಡನೇ ಅವಧಿಗೂ ಮುಂದುವರಿಸಲಾಗಿತ್ತು. ಸೆ. 23ಕ್ಕೆ ಅವರ ಅವಧಿ ಕೊನೆಗೊಂಡಿದ್ದರಿಂದ, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ನೂತನ ಕುಲಪತಿ ನೇಮಕ ಮಾಡಿದ್ದಾರೆ.

ಪ್ರೊ.ವಿದ್ಯಾಶಂಕರ್‌ ಅವರು ಇದಕ್ಕೂ ಮುನ್ನ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.