ಬೆಳಗಾವಿ: ರೆಡ್ಡಿ ಸಂಘ ಹಾಗೂ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಸಂಘದವರು ಮಕರ ಸಂಕ್ರಮಣ ಹಬ್ಬವನ್ನು ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯದ ಮೇಲ್ದಂಡೆಯಲ್ಲಿರುವ ಖಾಸಗಿ ಸ್ಥಳದಲ್ಲಿ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಬಗ್ಗೆ ವಿವಿಧ ಹಾಡುಗಳು ಹಾಗೂ ನೃತ್ಯವನ್ನು ಪ್ರಸ್ತುತಪಡಿಸಿದರು. ಜಯಶ್ರೀ ಹಾಗೂ ತಂಡದವರು ಕಾರ್ಯಕ್ರಮ ನೀಡಿದರು. ಸಮಾಜದ ಐವತ್ತು ಮಹಿಳೆಯರು, ಮಕ್ಕಳು ಹಾಗೂ ಮುಖಂಡರು ಭಾಗವಹಿಸಿದ್ದರು.
ಕಸ್ತೂರಿ ಭರಮನಿ, ಶಾಂತಾ ಜಂಗಲ, ಲತಾ ಅರಕೇರಿ, ಸವಿತಾ ನಾಡಗೌಡರ, ಲಕ್ಷ್ಮಿ ಚಾವಲಿ, ಭಾರತಿ ತುಂಗಳ, ಗೀತಾ ಕೆಂಚರಡ್ಡಿ, ನಿರ್ಮಲಾ ಕಾಮನಗೌಡರ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.