ADVERTISEMENT

ಅಂಬಿರಾವ್‌ ಪಾಟೀಲ ವಿರುದ್ಧ ಸತೀಶ ಜಾರಕಿಹೊಳಿ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 11:56 IST
Last Updated 24 ಏಪ್ರಿಲ್ 2019, 11:56 IST

ಬೆಳಗಾವಿ: ‘ಶಾಸಕ ರಮೇಶ ಜಾರಕಿಹೊಳಿ ಕಾಂಗ್ರೆಸ್‌ನಿಂದ ದೂರವಾಗಲು ಅವರ ಅಳಿಯ ಅಂಬಿರಾವ್‌ ಪಾಟೀಲ ಕಾರಣ’ ಎಂದು ಸಚಿವ ಸತೀಶ ಜಾರಕಿಹೊಳಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಗೋಕಾಕದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘20 ವರ್ಷಗಳ ಹಿಂದೆ ರಮೇಶ ಅವರ ಮಗನನ್ನು ನೋಡಿಕೊಳ್ಳಲು ಅಂಬಿರಾವ್‌ ಬಂದಿದ್ದರು. ನಂತರ ಅವರು ರಮೇಶ ಅವರ ಎಲ್ಲ ವ್ಯವಹಾರಗಳನ್ನು ನಿರ್ವಹಿಸಲು ಆರಂಭಿಸಿದರು. ಹೆಸರಿಗೆ ಮಾತ್ರ ರಮೇಶ ಶಾಸಕರಾಗಿದ್ದರು. ವರ್ಗಾವಣೆ, ಗುತ್ತಿಗೆ ಹಂಚಿಕೆ ಸೇರಿದಂತೆ ಎಲ್ಲ ವ್ಯವಹಾರಗಳನ್ನು ಅವರೇ ನೋಡಿಕೊಳ್ಳುತ್ತಿದ್ದರು’ ಎಂದರು.

‘ರಮೇಶ ಬಿಜೆಪಿ ಮುಖಂಡರ ಜೊತೆ ಚರ್ಚಿಸಲು, ಮುಂಬೈ ಹಾಗೂ ಇತರ ಕಡೆ ಹೋಗಿದ್ದಾಗಲೂ ಅಂಬಿರಾವ್‌ ಜೊತೆಗಿದ್ದರು. ಗೋಕಾಕದಲ್ಲಿ ಅಂಬಿರಾವ್‌ ಅತ್ಯಂತ ಪ್ರಬಲವಾಗಿ ಬೆಳೆದಿದ್ದಾರೆ. ಅವರನ್ನು ಕಂಡರೆ ಜನರು ಹೆದರುವ ಪರಿಸ್ಥಿತಿ ಬಂದಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.