
ಪ್ರಜಾವಾಣಿ ವಾರ್ತೆ
ಖಾನಾಪುರ: ತಾಲ್ಲೂಕು ಹಿರಿಯ ನಾಗರಿಕರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಈಚೆಗೆ ಪಟ್ಟಣದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಸಭೆಯಲ್ಲಿ ರಾಷ್ಟ್ರೀಯ ಹಿರಿಯ ನಾಗರಿಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಮಹಾಂತೇಶ ಹಿರೇಮಠ, ಬೆಳಗಾವಿ ಜಿಲ್ಲೆಯ ಅಧ್ಯಕ್ಷ ಎಸ್.ಜಿ. ಸಿದ್ನಾಳ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಂತೇಶ ಹಿರೇಮಠ, ‘ಹಿರಿಯ ನಾಗರಿಕರ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳ ಪರಿಹಾರಕ್ಕೆ ಸಂಘ ಸದಾ ಸಿದ್ಧ’ ಎಂದರು.
ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ವಿದ್ಯಾಧರ ಬನೋಶಿ, ಪ್ರವೀಣ ಹೀರೇಮಠ, ಸಿ.ಎಸ್. ಪಾಟೀಲ, ಜಿ.ಎಲ್. ಹೆಬ್ಬಾಳಕರ, ಅನ್ನಪೂರ್ಣ ಉಳ್ಳೇಗಡ್ಡಿ, ಎಲ್.ಡಿ. ಪಾಟೀಲ, ಎಂ.ಜಿ. ಬೆನಕಟ್ಟಿ, ಎಸ್.ಆರ್. ಕುಂದರಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.