ಬೆಳಗಾವಿ: ಇಲ್ಲಿನ ಜಾಧವನಗರದಲ್ಲಿರುವ ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಸಿಇಒ ಗಂಗೂಬಾಯಿ ಮಾನಕರ ಹಾಗೂ ಹನುಮಾನ್ ನಗರ ಟಿವಿ ಸೆಂಟರ್ನಲ್ಲಿರುವ ಪೊಲೀಸ್ ಅಧಿಕಾರಿ ಅಡಿವೆಪ್ಪ ಬೂದಿಗೊಪ್ಪ ಅವರ ಮನೆಯಲ್ಲಿ ಸೋಮವಾರ ಕಳವು ನಡೆದಿದೆ.
ಮನೆಯ ಬಾಗಿಲಿನ ಬೀಗ ಮುರಿದು ಟಿವಿ, ಬಟ್ಟೆ ಮೊದಲಾದ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. ಪೊಲೀಸ್ ಅಧಿಕಾರಿ ಮನೆಯಲ್ಲಿ ಕಳವಿಗೆ ಯತ್ನ ನಡೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಈ ಕುರಿತು ದೂರು ದಾಖಲಾಗಿಲ್ಲ.
9 ಕೆ.ಜಿ. ಬೆಳ್ಳಿ ಆಭರಣ ವಶ
ಬೆಳಗಾವಿ ತಾಲ್ಲೂಕಿನ ಮುತಗಾ ಬಳಿ ದಾಖಲೆ ಇಲ್ಲದೇ ಸಾಗಿಸುತ್ಯಿದ್ದ 9 ಕೆ.ಜಿ. 246 ಗ್ರಾಂ. ಬೆಳ್ಳಿ ಆಭರಣಗಳನ್ನು ಮಾರಿಹಾಳ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.
ಶಹಾಪುರದ ಕೋರೆ ಗಲ್ಲಿಯ ವಸೀಂ ಮುತವಾಲೆ (29), ಕೋಟೆ ರಸ್ತೆಯ ಅತ್ತಾವುಲ್ಲಾ ಮುಜಾವರ (26) ಹಾಗೂ ಲಕ್ಷ್ಮಿನಗರದ ಮುಜಮಿಲ್ ಸನದಿ (22) ಬಂಧಿತರು. ರಾಮದುರ್ಗದ ಕಡೆಯಿಂದ ಬರುತ್ತಿದ್ದಾಗ ಅವರ ವಾಹನವನ್ನು ಪೊಲೀಸರು ತಪಾಸಣೆ ನಡೆಸಿದಾಗ, ಬೆಳ್ಳಿ ಆಭರಣಗಳು ಪತ್ತೆಯಾದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.