ADVERTISEMENT

ಅಕ್ಕಿ ಅಕ್ರಮ ಸಾಗಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಮೇ 2022, 5:08 IST
Last Updated 27 ಮೇ 2022, 5:08 IST
ಪೊಲೀಸರು ಬಂಧಿಸಿರುವ ಅಕ್ಕಿ ಅಕ್ರಮ ಸಾಗಣೆ ಪ್ರಕರಣದ ಆರೋಪಿಗಳು
ಪೊಲೀಸರು ಬಂಧಿಸಿರುವ ಅಕ್ಕಿ ಅಕ್ರಮ ಸಾಗಣೆ ಪ್ರಕರಣದ ಆರೋಪಿಗಳು   

ಯಮಕನಮರಡಿ: ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಮಣಗುತ್ತಿ ಕ್ರಾಸ್‌ ಸಮೀಪ ಬಂಧಿಸಿದ್ದಾರೆ.

ಲಾರಿ ಚಾಲಕ ಮಹಾರಾಷ್ಟ್ರದ ಕೊಲ್ಲಾಪೂರ ರಾಧಾನಗರದ ನಿವಾಸಿ ಅಲ್ಲಾಭಕ್ಷ ಮುಸೇನಾ ಮುಜಾವರ (66) ಹಾಗೂ ವ್ಯಾಪಾರಿ ಬೆಳಗಾವಿಯ ವೀರಭದ್ರನಗರದ ಅಹಮ್ಮದ ಬಸೀರ ಅಹಮ್ಮದ ತಾರವಾಲೆ (33) ಬಂಧಿತರು. ₹ 1.79 ಲಕ್ಷ ಮೌಲ್ಯದ 12 ಟನ್ ಅಕ್ಕಿ ಹಾಗೂ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್‌ಸ್ಪೆಕ್ಟರ್ ವಿರೇಶ ದೊಡ್ಡಮನಿ, ನಾಗನಗೌಡಾ ಕಟ್ಟಿಮನಿ, ಆರ್.ಎ.ಶಿಂಧೆ, ಎಲ್.ವೈ. ಕಿಲ್ಲಾರಗಿ, ಎನ್.ಆರ್.ಗಡ್ಡೆಪ್ಪನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.