ADVERTISEMENT

ಬೆಳಿಗ್ಗೆ ಭಗವಂತನನ್ನು ನೆನೆಯುವುದರಿಂದ ಅಪಾಯಗಳು ದೂರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 13:02 IST
Last Updated 8 ನವೆಂಬರ್ 2023, 13:02 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದಡೆ,
ತಪ್ಪುವುವು ಅಪಮೃತ್ಯು ಕಾಲಕರ್ಮಂಗಳಯ್ಯಾ.
ದೇವಪೂಜೆಯ ಮಾಟ, ದುರಿತಬಂಧನದೋಟ!
ಶಂಭು ನಿಮ್ಮಯ ನೋಟ, ಹಿಂಗದ ಕಣ್ಬೇಟ!
ಸದಾ ಸನ್ನಿಹಿತನಾಗಿ ಶರಣೆಂಬುವುದು, ನಂಬುವುದು.
ಜಂಗಮಾರ್ಚನೆಯ ಮಾಟ ಕೂಡಲಸಂಗನ ಕೂಟ !

ಬೆಳಗಿನ ಜಾವದಲ್ಲಿ ಎದ್ದು ಭಗವಂತನ ನೆನೆಯುವುದರಿಂದ ನಮಗೆ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ. ನಮಗೆ ಆಗುವ ಅಪಾಯಗಳು ತಪ್ಪುತ್ತವೆ. ಸದಾಕಾಲ ಭಗವಂತನ ಸ್ಮರಣೆ ನಮ್ಮನ್ನು ಜಾಗೃತರನ್ನಾಗಿಸುತ್ತದೆ. ನಿರಂತರವಾಗಿ ಇಷ್ಟಲಿಂಗ ನೋಡುವುದರಿಂದ ನಮ್ಮಲ್ಲಿರುವ ಚೈತನ್ಯ ಶಕ್ತಿ ವೃದ್ಧಿಸುತ್ತದೆ. ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ.

ADVERTISEMENT

ಇಷ್ಟಲಿಂಗ ಪೂಜೆಯಾದ ನಂತರ ಜಂಗಮದಾಸೋಹ ಮಾಡಬೇಕು. ಅವಗ ನಮ್ಮ ಪೂಜೆ ಸಾರ್ಥಕವಾಗುತ್ತದೆ. ನಿತ್ಯವೂ ಸದಾಚಾರಿಯಾಗಿದ್ದುಕೊಂಡು ಸತ್ಯ ಶುದ್ಧ ಕಾಯಕ ಮಾಡುತ್ತ, ಶಿವಶರಣರ ಸೇವೆ ಮಾಡಬೇಕು. ಸೇವೆಯೊಂದಿಗೆ ಭಗವಂತನ ಮೇಲೆ ಅಪಾರವಾದ ನಂಬಿಕೆ ಇಡಬೇಕು. ಸಕಲವೂ ನೀನೆ, ಸರ್ವಸ್ವವೂ ನಿನ್ನದೇ ಎನ್ನುವ ಭಾವದೊಂದಿಗೆ ಜಂಗಮಪೂಜೆಯಾಗಬೇಕು. ಅಂದಾಗ ಕೂಡಲಸಂಗಮದೇವನನ್ನು ಕೂಡಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕೆ ಇಲ್ಲಿ ಜಂಗಮಾರ್ಚನೆಯ ಮಾಟ ಕೂಡಲಸಂಗನ ಕೂಟ ಎಂದು ಬಸವಣ್ಣನವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.