ADVERTISEMENT

ಅಥಣಿ: ವಾಲ್ಮೀಕಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 13:23 IST
Last Updated 13 ಅಕ್ಟೋಬರ್ 2019, 13:23 IST
ಅಥಣಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಫೋಟೊಗೆ ಮುಖಂಡ ರಮೇಶ ಸಿಂದಗಿ ಹಾಗೂ ಸಮಾಜದವರು ‍ಪೂಜೆ ಸಲ್ಲಿಸಿದರು
ಅಥಣಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಫೋಟೊಗೆ ಮುಖಂಡ ರಮೇಶ ಸಿಂದಗಿ ಹಾಗೂ ಸಮಾಜದವರು ‍ಪೂಜೆ ಸಲ್ಲಿಸಿದರು   

ಅಥಣಿ: ಇಲ್ಲಿನ ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಸಮಾಜದವರು ಪೂಜೆ ಸಲ್ಲಿಸಿದರು.

ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ಪ್ರಧಾನ ಕಾರ್ಯದರ್ಶಿ ರಮೇಶ ಸಿಂದಗಿ ಮಾತನಾಡಿ, ‘ಈ ವರ್ಷ ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯವರು ಜಯಂತಿ ಆಚರಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮುಖಂಡರಾದ ಸಹದೇವ ನಾಯಕ, ಅಶೋಕ ಯಲಹಡಗಿ, ಬಸವರಾಜ ಬುಟಾಳೆ, ಸುನೀಲ ಸುಟ್ರಾಯ್, ಸಂತೋಷ ಸಿಂದಗಿ, ಪಿ.ಎಲ್. ಪೂಜಾರಿ, ರಮೇಶ ಹುಲ್ಯಾಳ, ಬಸವರಾಜ ಪಾಟೀಲ, ಭೀಮು ಪೂಜಾರಿ, ಮಹೇಶ ತೆರದಾಳ, ಶ್ರೀಮಂತ ನಡುವಿನಮನಿ, ಶಂಕರ ನಾಯಕ, ಪರುಶುರಾಮ ನಾಯಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.