ADVERTISEMENT

ಕೌಜಲಗಿ | ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:06 IST
Last Updated 28 ಜುಲೈ 2024, 15:06 IST
ಕೌಜಲಗಿ ಸಮೀಪದ ಘಟಪ್ರಭಾ ನದಿ ಪ್ರವಾಹದಿಂದ ಜಲಾವೃತಗೊಂಡ ತಿಗಡಿ ಗ್ರಾಮಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಬಿ.ಎಂ.ಭಾಸ್ಕರ್ ರಾವ್ ಭೇಟಿ ನೀಡಿ, ಪರಿಶೀಲಿಸಿದರು
ಕೌಜಲಗಿ ಸಮೀಪದ ಘಟಪ್ರಭಾ ನದಿ ಪ್ರವಾಹದಿಂದ ಜಲಾವೃತಗೊಂಡ ತಿಗಡಿ ಗ್ರಾಮಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಬಿ.ಎಂ.ಭಾಸ್ಕರ್ ರಾವ್ ಭೇಟಿ ನೀಡಿ, ಪರಿಶೀಲಿಸಿದರು   

ಕೌಜಲಗಿ: ಘಟಪ್ರಭಾ ನದಿಗೆ ಹೊರ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮೀಪದ ಮೂಡಲಗಿ ತಾಲ್ಲೂಕಿನ ತಿಗಡಿ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದ್ದು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ನದಿ ತೀರದ ಗ್ರಾಮಗಳಿಗೆ ಆಪ್ತ ಸಹಾಯಕ ಭಾಸ್ಕರ್ ರಾವ್ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸುರಕ್ಷಿತವಾದ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿಕೊಂಡರು.

ಸುಣಧೋಳಿಯ ಜಡಿಸಿದ್ಧೇಶ್ವರ ತೋಟದ ಶಾಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಕಾಳಜಿ ಕೇಂದ್ರವನ್ನು ಆರಂಭವಾಗಿದೆ. ಹೆಚ್ಚುತ್ತಿರುವ ಮಳೆಯಿಂದಾಗಿ ಸುಣಧೋಳಿ ಗ್ರಾಮದ ಕೆಲ ಪ್ರದೇಶಗಳು ಜಲಾವೃತಗೊಂಡಿದ್ದು, ಸುರಕ್ಷಿತ ದೃಷ್ಟಿಯಿಂದ ಅಂತಹ ಕುಟುಂಬಗಳಿಗೆ ಈ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಶಾಸಕರಾದ ಮಾನ್ಯ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಮೂಡಲಗಿ ತಾಲ್ಲೂಕು ಆಡಳಿತವು ಕಾಳಜಿ ಕೇಂದ್ರವನ್ನು ಆರಂಭಿಸಿದೆ.

ಭಾಸ್ಕರ್ ರಾವ್, ಗ್ರಾ.ಪಂ.ಅಧ್ಯಕ್ಷ ಸಿದ್ದಪ್ಪ ದೇವರಮನಿ, ರಾಮಣ್ಣ ಬೆಣ್ಣೆ, ಸಿದ್ದಾರೂಢ ಕಮತಿ, ಉದಯ ಜಿಡ್ಡಿಮನಿ, ನಾಗಪ್ಪ ಪಾಶಿ, ಅನಿಲ ಕಣಕಿಕೊಡಿ, ಪಿಡಿಓ ಗಂಗಾಧರ ಮಲ್ಲಾರಿ, ಗ್ರಾಮ ಆಡಳಿತ ಅಧಿಕಾರಿ ಎಂ.ಬಿ. ಶಿಗಿಹೊಳಿ, ಶಾಲೆಯ ಪ್ರಧಾನ ಗುರು ರವಿ ಹುಲಗನ್ನವರ, ಪುಂಡಲೀಕ ಬೆಣ್ಣಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.