ಬೆಳಗಾವಿ: ‘ಕೊರೊನಾ ಎದುರಿಸಿ ಬದುಕುವ ಕಲೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಇದಕ್ಕಾಗಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು’ ಎಂದು ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಇಲ್ಲಿನ ಗಣೇಶಪುರದಲ್ಲಿರುವ ಶಾಖಾ ಮಠದಲ್ಲಿ ಭಾನುವಾರ ನಡೆದ ‘ಸುವಿಚಾರ ಚಿಂತನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಾವೆಲ್ಲರೂ ಮಡಿವಂತರಾಗಬೇಕಯ. ಸ್ವಚ್ಛತೆಯೇ ಮಡಿವಂತಿಕೆ. ಹೊರಗಿನಿಂದ ಮನೆಗೆ ಬಂದಾಗ ಕೈ–ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಸುವಿಚಾರ ಚಿಂತನೆ ಮಾಡಬೇಕು. ಉತ್ತಮ ಆಹಾರ, ಬಿಸಿ ನೀರು ಸೇವಿಸಬೇಕು. ಕಾಲ ಕಲಿಸುತ್ತಿರುವ ಪಾಠವನ್ನು ಅರ್ಥ ಮಾಡಿಕೊಂಡು ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
ದಂಡು ಮಂಡಳಿ ಸದಸ್ಯ ಚಂದ್ರಶೇಖರಯ್ಯ ಸವಡಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.