ADVERTISEMENT

‘ಕಲಿಕಾ ಗುಣಮಟ್ಟ ಸುಧಾರಣೆ ಅಗತ್ಯ’

ಪ್ರೊ. ವಿಷ್ಣುಕಾಂತ ಚಟಪಳ್ಳಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 12:28 IST
Last Updated 12 ಜುಲೈ 2019, 12:28 IST
ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂ.ಬಿ.ಎ. ವಿಭಾಗದ ಪ್ರಾಧ್ಯಾಪಕ ವಿಷ್ಣುಕಾಂತ ಚಟಪಳ್ಳಿ ಮಾತನಾಡಿದರು. ಪ್ರಾಚಾರ್ಯ ಎಸ್.ಎನ್.ಪಾಟೀಲ, ಎ.ಎಸ್. ಕುಲಕರ್ಣಿ, ಪ್ರೊ.ಎಂ.ಎನ್. ದೇಸಾಯಿ ಇದ್ದಾರೆ
ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂ.ಬಿ.ಎ. ವಿಭಾಗದ ಪ್ರಾಧ್ಯಾಪಕ ವಿಷ್ಣುಕಾಂತ ಚಟಪಳ್ಳಿ ಮಾತನಾಡಿದರು. ಪ್ರಾಚಾರ್ಯ ಎಸ್.ಎನ್.ಪಾಟೀಲ, ಎ.ಎಸ್. ಕುಲಕರ್ಣಿ, ಪ್ರೊ.ಎಂ.ಎನ್. ದೇಸಾಯಿ ಇದ್ದಾರೆ   

ಬೆಳಗಾವಿ: ‘ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಕಲಿಕಾ ಗುಣಮಟ್ಟ ಸುಧಾರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಪ್ರಯತ್ನಿಸಬೇಕು’ ಎಂದುರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂ.ಬಿ.ಎ. ವಿಭಾಗದ ಪ್ರಾಧ್ಯಾಪಕ ವಿಷ್ಣುಕಾಂತ ಚಟಪಳ್ಳಿ ಹೇಳಿದರು.

ಇಲ್ಲಿನ ಭಾವುರಾವ ಕಾಕತಕರ ಕಾಲೇಜಿನಲ್ಲಿ ಬೆಂಗಳೂರಿನ ನ್ಯಾಕ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳ ಏಳ್ಗೆಯಾಗದ ಹೊರತು ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ನೂತನ ಕಾರ್ಯಕ್ರಮ ರೂಪಿಸಬೇಕಿದೆ’ ಎಂದರು.

ಕಾಲೇಜಿನ ಪ್ರಾಚಾರ್ಯ ಎಸ್.ಎನ್. ಪಾಟೀಲ ಮಾತನಾಡಿದರು. ಡಿ.ಎನ್. ಮೀಸಾಳೆ, ಪ್ರೊ.ಎಂ.ಎನ್. ದೇಸಾಯಿ ಇದ್ದರು. ಎ.ಎಸ್. ಕುಲಕರ್ಣಿ ಸ್ವಾಗತಿಸಿದರು. ಪ್ರೊ.ಎಂ.ಎನ್. ದೇಸಾಯಿ ವಂದಿಸಿದರು. ಭಕ್ತಿ ದೇಸಾಯಿ ನಿರೂಪಿಸಿದರು.

ADVERTISEMENT

ನಂತರ ನಡೆದ ಗೋಷ್ಠಿಗಳಲ್ಲಿ ಪ್ರಾಚಾರ್ಯ ಎಸ್.ಎಸ್. ಗವತಿ, ಕೊಲ್ಲಾಪುರದ ಎಸ್.ಆರ್. ಕುಲಕರ್ಣಿ ಮಾತನಾಡಿದರು. ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.