ಯೇಸು ಈ ಭೂಮಿ ಮೇಲೆ ಹುಟ್ಟಿ 21 ಶತಮಾನಗಳು ಕಳೆದು ಹೋದವು. ಆದರೂ ಜಗತ್ತಿನ ಉದ್ಧಾರಕ್ಕಾಗಿ ಅವರು ನೀಡಿದ ಸಂದೇಶಗಳನ್ನು ಪರಿಣಾಮಕಾರಿಯಾಗಿ ಅನುಸರಿಸಲು ಆಗಿಲ್ಲ. ಪರಸ್ಪರ ಪ್ರೀತಿ, ಗೌರವ ಹಾಗೂ ಸಹಾಯ ಮಾಡಿದರೆ ಸಾಕು; ಜಗತ್ತು ಕಲ್ಯಾಣವಾಗುತ್ತದೆ.
ಯೇಸು ಅರಮನೆಯಲ್ಲಿ ಹುಟ್ಟಲಿಲ್ಲ. ಸಣ್ಣ ಊರಿನಲ್ಲಿ ಗೋದಲಿಯಲ್ಲಿ ಜನ್ಮತಳೆದರು. ಬೆತ್ಲಹೇಮ್ನಲ್ಲಿ ಆ ಕಾಲದ ದಿನಗಳು ಮಾನವರಿಗೆ ಕಠಿಣವಾಗಿದ್ದವು. ಅವರ ನೋವು ಮರೆಸಿ, ಶಾಂತಿ ನೀಡಲು ಯೇಸು ಜನಿಸಿದರು.
ಜೀಸಸ್ ಈ ಜಗತ್ತಿಗೆ ಬಂದಿದ್ದು ಮನುಷ್ಯರನ್ನು ಪಾಪಗಳಿಂದ ಬಿಡುಗಡೆ ಮಾಡಲು. ಸಹಜೀವಿಗಳಿಗೆ ಸಂಕಟ ತಂದೊಡ್ಡುವುದೇ ಆಧುನಿಕ ಪ್ರಪಂಚದ ದೊಡ್ಡ ಪಾಪವಾಗಿದೆ. ಇದು ಸಂಕಟ ತಂದೊಡ್ಡುವ ಕಾಲವಲ್ಲ; ಕಾಳಜಿ ವಹಿಸುವ ಕಾಲ. ಆ ಕಾಳಜಿ ಗುಣವನ್ನೇ ನಾವು ಯುವಪೀಳಿಗೆಗೆ ಧಾರೆ ಎರೆಯೋಣ.
ಬಿಷಪ್ ರೆವರೆಂಡ್ ಡಾ.ಡೆರೆಕ್ ಫರ್ನಾಂಡಿಸ್, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.