ADVERTISEMENT

ಅನೈತಿಕ ಸಂಬಂಧ: ಒಬ್ಬನ ಕೊಲೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2010, 11:55 IST
Last Updated 17 ಡಿಸೆಂಬರ್ 2010, 11:55 IST

ಹೊಸಕೋಟೆ:  ನಗರದಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಚಾಂದ್ ಪಾಷ (37) ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಜಿ ಮೊಹಲ್ಲಾ ಬಡಾವಣೆಯ ಜಾಕೀರ್ ಹುಸೇನ್ (42) ಎಂಬಾತನನ್ನು ಸಿಪಿಐ ಎಂ.ಮಲ್ಲೇಶ್ ಹಾಗೂ ಸಿಬ್ಬಂದಿ ಸಂಜೆ ಬಂಧಿಸಿದ್ದಾರೆ.

ಜಾಕೀರ್ ಹುಸೇನ್‌ನ ಪತ್ನಿ ಜೊತೆ ಚಾಂದ್‌ಪಾಷ ಅಕ್ರಮ ಸಂಬಂಧ ಹೊಂದಿದ್ದೇ  ಆತನ ಕೊಲೆಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮರಗೆಲಸ ವೃತ್ತಿ ಮಾಡುತ್ತಿದ್ದ, ಮದನಪಲ್ಲಿ ಮೂಲದ ಚಾಂದ್‌ಪಾಷನನ್ನು ಅಂಬೇಡ್ಕರ್ ಕಾಲೊನಿ ಬಳಿ ಚಹಾ ಕುಡಿಯಲು ಹೋಗುತ್ತಿದ್ದಾಗ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.