ಬೆಂಗಳೂರು: ವಿವೇಚನಾರಹಿತವಾಗಿ ವಿಧಿಸಿರುವ ಅಬಕಾರಿ ಸುಂಕವನ್ನು ಕೂಡಲೇ ತೆಗೆದುಹಾಕುವಂತೆ ಜವಳಿ ಮಂತ್ರಾಲಯವನ್ನು ದಕ್ಷಿಣ ಭಾರತ ಗಾರ್ಮೆಂಟ್ ಒಕ್ಕೂಟದ ಅಧ್ಯಕ್ಷ ಕುಂದನ್ಜೈನ್ ಒತ್ತಾಯಿಸಿದ್ದಾರೆ.
ಸಿದ್ಧ ಉಡುಪು ತಯಾರಿಕೆಗೆ ಅಬಕಾರಿ ಸುಂಕವನ್ನು ವಿಧಿಸಲಾಗುತ್ತಿದೆ ಆದರೆ ಸಾಂಪ್ರದಾಯಿಕವಾಗಿ ಲೇಬಲ್ ಇಲ್ಲದೇ ಎಷ್ಟೋ ಸಿದ್ಧ ಉಡುಪುಗಳು ಈ ವ್ಯಾಪ್ತಿಯಿಂದ ಹೊರಗಿವೆ. ಆದ್ದರಿಂದ ಗಾರ್ಮೆಂಟ್ನಲ್ಲಿ ತಯಾರಾಗುವ ಸಿದ್ಧ ಉಡುಪುಗಳನ್ನು ಈ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.