ADVERTISEMENT

ಆಧುನಿಕತೆಯಿಂದ ಅನಾರೋಗ್ಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2012, 18:40 IST
Last Updated 2 ಜೂನ್ 2012, 18:40 IST

ಬೆಂಗಳೂರು: `ಸಮಾಜದಲ್ಲಿ ಆಧುನಿಕತೆ ಹೆಚ್ಚಿದಂತೆ ಅನಾರೋಗ್ಯವೂ ಹೆಚ್ಚಾಗುತ್ತಿದೆ. ಜನರು ಸಾಂಪ್ರದಾಯಿಕ ಆಹಾರ ಪದ್ಧತಿ ಕೈ ಬಿಟ್ಟು ಆಧುನಿಕ ಆಹಾರ ಪದ್ಧತಿಗೆ ಮೊರೆ ಹೋಗಿರುವುದು ಇದಕ್ಕೆ ಕಾರಣ~ ಎಂದು ಹೋಟೆಲ್ ಉದ್ಯಮಿ ಪಿ. ಸದಾನಂದ ಮಯ್ಯ ಪ್ರತಿಪಾದಿಸಿದರು.

ಉನ್ನತ ಶಿಕ್ಷಣ ಪರಿಷತ್ ಹಾಗೂ ತುಮಕೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಉನ್ನತ ಶಿಕ್ಷಣ ಪರಿಷತ್‌ನ ಸಭಾಂಗಣದಲ್ಲಿ ಶನಿವಾರ ನಡೆದ `ಆರೋಗ್ಯದಲ್ಲಿ ಆಹಾರ~ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.

`ಆರೋಗ್ಯಕರ ದೇಹಕ್ಕೆ ಸಾಂಪ್ರದಾಯಿಕ ಆಹಾರ ಪದ್ಧತಿ ಅನುಸರಿಸುವುದು ಅಗತ್ಯ. ಆಧುನಿಕತೆಯ ಭರಾಟೆಗೆ ಮರುಳಾಗಿ ಆಹಾರ ಪದ್ಧತಿ ಬದಲಾಯಿಸಿದ್ದೇವೆ. ಈ ಹಿಂದೆ ಅಕ್ಕಿಯನ್ನು ಪಾಲಿಷ್ ಮಾಡುತ್ತಿರಲಿಲ್ಲ. ಕಾಫಿಯೂ ಕಲಬೆರಕೆ ಆಗಿದೆ. ಇದರಿಂದ ಅನಾರೋಗ್ಯ ಹೆಚ್ಚುತ್ತಿದೆ. ವಿಜ್ಞಾನದ ನ್ಯಾನೊ ತಂತ್ರಜ್ಞಾನದಂತೆ ಆಹಾರದಲ್ಲೂ ನ್ಯಾನೊ ತಂತ್ರಜ್ಞಾನ ಅಳವಡಿಕೆ ಅಗತ್ಯ~ ಎಂದರು.

ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಎಸ್.ಸಿ. ಶರ್ಮಾ, ಉನ್ನತ ಶಿಕ್ಷಣ ಪರಿಷತ್ ಕಾರ್ಯಕಾರಿ ನಿರ್ದೇಶಕ ಡಾ.ಕೆ.ಎಂ. ಕಾವೇರಿಯಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.