
ಬೆಂಗಳೂರು: ನಾಗರಿಕರಿಗೆ ನೈತಿಕ ರಾಜಕಾರಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಇದೇ ತಿಂಗಳ ಮೊದಲ ವಾರದಿಂದ ರಾಜ್ಯಾದ್ಯಂತ ‘ಮನೆ ಮನೆಯಲ್ಲಿ ಆಮ್ ಆದ್ಮಿ, ಮನೆ ಮನೆಗೂ ಆಮ್ ಆದ್ಮಿ’ ಎಂಬ ಜನ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಪೃಥ್ವಿರೆಡ್ಡಿ, ಈ ಅಭಿಯಾನದ ಮೂಲಕ ಪ್ರತಿ ಮನೆಯಲ್ಲೂ ಕಾರ್ಯಕರ್ತರನ್ನು ಗುರುತಿಸುವುದರ ಜತೆಗೆ ಸಾಮಾನ್ಯ ಜನರ ಕುಂದುಕೊರತೆಗಳನ್ನು ಆಲಿಸಲಾಗುವುದು ಎಂದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಭ್ರಷ್ಟರ ಪಟ್ಟಿ ಬಿಡುಗಡೆ ಮಾಡಿದ್ದು, ಅಂತಹ ಭ್ರಷ್ಟರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಪಕ್ಷಕ್ಕೆ ಸೇರ್ಪಡೆ: ನಿವೃತ್ತ ರಾಯಭಾರಿ ಪಿ.ಎ. ನಜರತ್, ಉದ್ಯಮಿ ರಮಣಿಕ್ ಬಕ್ಷಿ, ಇನ್ಫೊಸಿಸ್ನ ನಿವೃತ್ತ ಸಿಎಫ್ಓ ವಿ.ಬಾಲಕೃಷ್ಣನ್, ಲೋಕಸತ್ತಾ ಪಕ್ಷದಲ್ಲಿದ್ದ ರವಿ ಕೃಷ್ಣರೆಡ್ಡಿ ಮತ್ತು ಶಾಂತಲಾ ದಾಮ್ಲೆ ಅಧಿಕೃತವಾಗಿ ಎಎಪಿಗೆ ಸೇರ್ಪಡೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.