ADVERTISEMENT

ಉಚಿತ ಕನ್ನಡ ಪುಸ್ತಕ ವಿತರಣೆ

ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ಘಟಕ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 18:44 IST
Last Updated 22 ಏಪ್ರಿಲ್ 2018, 18:44 IST
ಉಚಿತವಾಗಿ ಕನ್ನಡ ಪುಸ್ತಕ ವಿತರಿಸಿ ಸಿಹಿ ಹಂಚಲಾಯಿತು
ಉಚಿತವಾಗಿ ಕನ್ನಡ ಪುಸ್ತಕ ವಿತರಿಸಿ ಸಿಹಿ ಹಂಚಲಾಯಿತು   

ಬೆಂಗಳೂರು: ‘ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ’ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೈ.ಬಿ.ಎಚ್.ಜಯದೇವ್ ಹೇಳಿದರು.

ಪೀಣ್ಯದಾಸರಹಳ್ಳಿ ಸಮೀಪದ ಮಲ್ಲಸಂದ್ರ ಬಳಿಯ ಪೈಪ್‌ಲೈನ್‌ ಉದ್ಯಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ಘಟಕ ಹಾಗೂ ಜೀವಸ್ಪಂದನ ಸೇವಾಟ್ರಸ್ಟ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.

'ಉದ್ಯಾನದಲ್ಲಿ ಕುಳಿತು ವಿಹರಿಸುವವರಿಗೆ ಪುಸ್ತಕಗಳನ್ನು ನೀಡುತ್ತಿದ್ದೇವೆ. ಅವರು ಅವುಗಳನ್ನು ಓದಿ, ಮನೆಗೆ ಕೊಂಡೊಯ್ದು ಇತರರಿಗೂ ಓದಿಸುವಂತೆ ಕೋರುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಟ್ರಸ್ಟ್‌ ಅಧ್ಯಕ್ಷ ಜೀವನ್ ಕಿಶೋರ್, 'ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ನಲ್ಲಿಯೇ ಎಲ್ಲರೂ ಮುಳುಗಿರುತ್ತಾರೆ. ಪುಸ್ತಕಗಳ ಸಂಗ ಮಾಡಿದರೆ, ನಮ್ಮ ಮನಸ್ಸು ವಿಶಾಲವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.