ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 25ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡಗಳ ಮಧ್ಯೆ ನಡೆದ ಕ್ರಿಕೆಟ್ ಪಂದ್ಯದ ವೇಳೆ ಸುಮಾರು 10ಕ್ಕೂ ಹೆಚ್ಚು ಬೈಕ್ಗಳು ಕಳುವಾಗಿವೆ.
ಈ ಸಂಬಂಧ ಬೈಕ್ಗಳ ಸವಾರರು ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಆರ್ಸಿಬಿ ಇನ್ನಿಂಗ್ಸ್ ನೋಡಿ ಬಂದಾಗ ನನ್ನ ಬೈಕ್ ಇರಲಿಲ್ಲ. ನಾನು ಬೈಕ್ ಇಟ್ಟ ಸ್ಥಳದಲ್ಲೇ ಎನ್ಫಿಲ್ಡೊಂದನ್ನು ಪಾರ್ಕ್ ಮಾಡಲಾಗಿತ್ತು. ನನ್ನ ಬೈಕ್ಗಾಗಿ ಹುಡುಕಾಟ ನಡೆಸಿ ಅರ್ಧಗಂಟೆ ಬಿಟ್ಟು ಅದೇ ಸ್ಥಳಕ್ಕೆ ಬಂದಾಗ, ಅಲ್ಲಿದ್ದ ಎನ್ಫಿಲ್ಡ್ ಬೈಕ್ ಕೂಡ ನಾಪತ್ತೆಯಾಗಿತ್ತು’ ಎಂದು ದೂರು ನೀಡಿದ್ದ ನರೇಂದ್ರಬಾಬು ಆಶ್ಚರ್ಯ ವ್ಯಕ್ತಪಡಿಸಿದರು.
‘ಬೈಕ್ ಕಳವು ಮಾಡಿರುವವರ ಸುಳಿವು ಲಭ್ಯವಾಗಿಲ್ಲ. ಭಾನುವಾರ ನಡೆಯಲಿರುವ ಪಂದ್ಯಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.