ADVERTISEMENT

ಕನ್ನಡವೇ ಆದ್ಯತೆಯಾಗಲಿ: ಚಂಪಾ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:45 IST
Last Updated 17 ಡಿಸೆಂಬರ್ 2013, 19:45 IST
ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಕ್ರೀಡಾಪಟು ಯುಕ್ತಾಶ್ರೀ ಅವರನ್ನು ಅಭಿನಂದಿಸ­ಲಾ­ಯಿತು. ಶಾಸಕ ಎಸ್‌.ಮುನಿರಾಜು, ಸಾಹಿತಿ ಚಂಪಾ ಮತ್ತಿತರರು ಹಾಜರಿದ್ದರು.
ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕ್ರೀಡಾಪಟು ಯುಕ್ತಾಶ್ರೀ ಅವರನ್ನು ಅಭಿನಂದಿಸ­ಲಾ­ಯಿತು. ಶಾಸಕ ಎಸ್‌.ಮುನಿರಾಜು, ಸಾಹಿತಿ ಚಂಪಾ ಮತ್ತಿತರರು ಹಾಜರಿದ್ದರು.   

ಪೀಣ್ಯದಾಸರಹಳ್ಳಿ: ಮಕ್ಕಳು ಮಾತೃ­ಭಾಷೆ­ಯನ್ನು ಕಲಿತಾಗ ಮಾತ್ರ ಅವರ ಆಲೋಚನೆ, ವಿಚಾರಗಳಿಂದ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರ­ಸ್ಕಾರ, ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಸಕ ಎಸ್.ಮುನಿರಾಜು ಮಾತ­ನಾಡಿ ಕನ್ನಡ ನಾಡಿಗೆ ಯಾವ ಭಾಷೆ­ಯವರು ಬಂದರೂ ಮೊದಲು ಅವರಿಗೆ ಕನ್ನಡ ಕಲಿಸಬೇಕು ನಮ್ಮ ಭಾಷೆಯ ವ್ಯಾಮೋಹ ಹೆಚ್ಚಿನ ರೀತಿಯಲ್ಲಿ ಬೆಳೆಯುವಂತೆ ಮಾಡಬೇಕು ಎಂದರು.

ಚಲನಚಿತ್ರ ನಟ ರಮೇಶ್‌ ಭಟ್‌, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಟಿ. ತಿಮ್ಮೇಶ್‌, ಭೈರ­ಮಂಗಲ ರಾಮೇಗೌಡ, ದಾಸರಹಳ್ಳಿ ಕಸಾಪ ಅಧ್ಯಕ್ಷ ವೈ.ಬಿ. ಎಚ್‌. ಜಯದೇವ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.