ಬೆಂಗಳೂರು: `ಕನ್ನಡ ಸಾಹಿತ್ಯಕ್ಕೆ ಜೈನರು ಅಡಿಪಾಯ ಹಾಕಿ ಸಾಹಿತ್ಯದ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಿದ್ದಾರೆ~ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಶ್ಲಾಘಿಸಿದರು.
ಮಹಾವೀರ ಮಿಷನ್ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪಂಪ ಮಹಾಕವಿಯ 1109ನೇ ಜಯಂತ್ಯುತ್ಸವ ಹಾಗೂ `ಜೈನ ರಾಮಾಯಣ ಭಾಗ-1~, `ಹೊಳಲ್ಕೆರೆ ಜಿನಮಂದಿರದ ಜೀರ್ಣೋದ್ಧಾರದ ಕಥೆಗಳು~ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
`ಪಂಪ ಕವಿ ಯಾವುದೇ ಜಾತಿಗೆ ಸೇರಿದ ವ್ಯಕ್ತಿಯಾಗದೇ ಮನುಷ್ಯ ಜಾತಿಗೆ ಸಂಬಂಧಿಸಿದವನು. ಆತ ಜಾಗತಿಕ ಮಟ್ಟದಲ್ಲೇ ಶ್ರೇಷ್ಠ ಕವಿ~ ಎಂದು ಬಣ್ಣಿಸಿದರು.
ಸಾಹಿತಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, `ಬೇರೆ ಬೇರೆ ಕಾಲಘಟ್ಟದಲ್ಲಿ ಧರ್ಮಗಳು ಹುಟ್ಟಲು ಅಸಮಾನತೆಯೇ ಕಾರಣ. ತಾರತಮ್ಯದ ವಿರುದ್ಧ ಧ್ವನಿ ಎತ್ತಲು ಹುಟ್ಟಿಕೊಂಡಿದ್ದೆ ಜೈನ ಹಾಗೂ ಬೌದ್ಧ ಧರ್ಮಗಳು~ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.