ಬೆಂಗಳೂರು: ವೈಟ್ಫೀಲ್ಡ್ ಬಳಿ ಗರುಡಾಚಾರ ಪಾಳ್ಯ ವಾರ್ಡ್ನಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ನನ್ನು ಮಂಗಳವಾರ ಪಾಲಿಕೆ ಸದಸ್ಯ ನಿತಿನ್ ಪುರುಷೋತ್ತಮ್ ಉದ್ಘಾಟಿಸಿದರು.
‘ವಿರೋಧ ಪಕ್ಷದ ಟೀಕೆಗಳನ್ನು ಮೀರಿ ಇಂದಿರಾ ಕ್ಯಾಂಟೀನ್ ಉತ್ತಮ ವಾಗಿ ಸಾಗುತ್ತಿದೆ. ಬಡವರ ಹಸಿವು ನೀಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.
‘ಜನರನ್ನು ಸೋಂಬೇರಿಗಳನ್ನಾಗಿ ಮಾಡುತ್ತಿದ್ದಾರೆ ಎಂಬ ಟೀಕೆ ಬಂದವು. ಆದರೆ, ಎಲ್ಲದಕ್ಕೂ ಕ್ಯಾಂಟೀನ್ ಸುಗಮವಾಗಿ ಸಾಗುತ್ತಿರುವುದೇ ಉತ್ತರ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.