ADVERTISEMENT

ಗಾರೆ ಕೆಲಸಗಾರ ಲೋಕಸಭೆ ಅಭ್ಯರ್ಥಿ!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಬೆಂಗಳೂರು: ಗಾರೆ ಕೆಲಸ ಮಾಡುವ ನಾಯಂಡಹಳ್ಳಿ ನಿವಾಸಿ ಪ್ರಭು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ  ನಾಮಪತ್ರ ಸಲ್ಲಿಸಿದ್ದಾರೆ.

ಪ್ರಭು ಅವರ ಬಳಿ ಬ್ಯಾಂಕ್‌ ಖಾತೆಯಾಗಲಿ, ಪಾನ್‌ ಕಾರ್ಡಾಗಲಿ ಇಲ್ಲ. ಆದರೆ ಕೈಯಲ್ಲಿ ₨ 30 ಸಾವಿರ ನಗದು ಹಾಗೂ ಅಂದಾಜು ₨ 60 ಸಾವಿರ ಮೌಲ್ಯದ 20 ಗ್ರಾಂ ಚಿನ್ನ ಇದೆ ಎಂದು ನಾಮಪತ್ರದೊಂದಿಗೆ ನೀಡಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಪಡೆದಿರುವ ಇವರ ಬಳಿ ಒಟ್ಟು 90 ಸಾವಿರ ಮೌಲ್ಯದ ಚರಾಸ್ತಿ ಇದೆ. ಇದನ್ನು ಹೊರತು ಪಡಿಸಿ ಮನೆ, ಖಾಲಿ ನಿವೇಶನ, ವಾಹನ ಸೇರಿದಂತೆ ಬೇರೆ ಯಾವ ಆಸ್ತಿಯೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.