ನೆಲಮಂಗಲ: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಯುಗದಲ್ಲಿಯೂ ಗ್ರಾಮೀಣ ಮಹಿಳೆಯರ ಬದುಕು ಶೋಚನೀಯವಾಗುತ್ತಿರುವುದು ವಿಷಾದನೀಯ ಎಂದು ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ವಿಷಾದಿಸಿದರು.
ಭಾರತೀಯ ವೈದ್ಯ ಸಂಘದ ಸ್ಥಳೀಯ ಶಾಖೆ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಮಹಿಳಾ ದಿನಾಚರಣೆಯಿಂದ ಸ್ಫೂರ್ತಿ ಪಡೆದು ನಾವು ಸಬಲೀಕರಣದತ್ತ ಸಾಗಬೇಕು~ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಜಯ ಪ್ರಸಾದ್, `ಸ್ವಾಭಿಮಾನದ ಖನಿಯಾದ ವಚನಕಾರ್ತಿ ಅಕ್ಕಮಹಾದೇವಿ, ಸಮಾಜ ಸೇವೆಗೆ ಹೆಸರಾದ ಮದರ್ ತೆರೇಸಾ ಎಲ್ಲ ಸವಾಲುಗಳನ್ನೂ ಮೀರಿ ಬೆಳೆದುದು ಮಹಿಳೆಯರಿಗೆ ಮಾದರಿ~ ಎಂದರು.
ಡಾ. ಲೀಲಾವತಿ ಪ್ರಸಾದ್ ಸ್ವಾಗತಿಸಿದರು. ಡಾ. ಸುಶ್ಮಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಾರುಣಿ ವಸಂತಕುಮಾರ್ ವಂದಿಸಿದರು. ರೇಣುಕಾ ಜಯಪ್ರಸಾದ್ ನಿರೂಪಿಸಿದರು. ವೇದಿಕೆಯಲ್ಲಿ ಖಜಾಂಚಿ ಡಾ. ವಸಂತ ಕುಮಾರ್, ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.